ಕಾಸರಗೋಡು: ಮರಬಿದ್ದು 13 ವರ್ಷದ ಬಾಲಕ ಸಾವು

Prasthutha|

ಕಾಸರಗೋಡು: ಭಾರೀ ಗಾಳಿಗೆ ಬಾಲಕನ ಮೇಲೆ ತೆಂಗಿನ ಮರವೊಂದು ಮುರಿದು ಬಿದ್ದ ಪರಿಣಾಮ ಬಾಲಕ ಮೃತಪಟ್ಟ ಧಾರುಣ ಘಟನೆ ಕಾಸರಗೋಡಿನ ಬಂದಿಯೋಡ್ ಕಯ್ಯಾರಿನಲ್ಲಿ ನಡೆದಿ‍ದೆ.

- Advertisement -

ಪತ್ರಕರ್ತ ಸ್ಟೀಫನ್ ಕ್ರಾಸ್ತಾ ಅವರ ಪುತ್ರ ಸೋನು ಕ್ರಾಸ್ತಾ (13) ಮೃತ ಪಟ್ಟ ಬಾಲಕ.

ಬಾಲಕ ಸೋನು ಮನೆ ಬಳಿಯ ತೋಟದಲ್ಲಿ ಆಟವಾಡುತ್ತಿದ್ದ ವೇಳೆ ಭಾರೀ ಗಾಳಿ ಬಂದಿದೆ. ಪರಿಣಾಮ ತೆಂಗಿನ ಮರವೊಂದು ಮುರಿದು ಬಾಲಕನ ಮೈ ಮೇಲೆ ಬಿದ್ದಿದ್ದು, ಬಾಲಕ ಗಂಭೀರವಾಗಿ ಗಾಯಗೊಂಡಿದ್ದನು ಎನ್ನಲಾಗಿದೆ.

- Advertisement -

ತಕ್ಷಣ ಆತನನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಮೃತಪಟ್ಟಿದ್ದಾನೆ.

Join Whatsapp