ಸಿಗರೇಟ್ ಪ್ಯಾಕ್ ನಲ್ಲಿ ಪ್ರಸಾದ ವಿತರಿಸುತ್ತಿರುವ ಗುರುದ್ವಾರ ಸಮಿತಿ!

Prasthutha|

ಅಮೃತಸರ: ಗುರುದ್ವಾರವೊಂದರಲ್ಲಿ ಪ್ರಸಾದ ವಿತರಿಸಲು ಸಿಗರೇಟ್ ಪ್ಯಾಕ್‌ಗಳನ್ನು ಬಳಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.

- Advertisement -

ಕರ್ತಾರ್‌ಪುರ ಮತ್ತು ನಂಗನಾ ಸಾಹಿಬ್‌ ಗುರುದ್ವಾರದಲ್ಲಿ ಭಕ್ತರಿಗೆ ವಿತರಿಸಲು ಸಿಗರೇಟ್ ಪ್ಯಾಕ್ ಅನ್ನು ಬಳಸಲಾಗುತ್ತಿದೆ ಎಂದು ಆರೋಪಿಸಲಾಗಿದೆ.

ಯಾತ್ರಾರ್ಥಿಗಳು ಪ್ರಸಾದದ ಪೊಟ್ಟಣ ತೆರೆದಾಗ ಸಿಗರೇಟ್ ಪ್ಯಾಕೆಟ್ ಕಂಡು ಆಶ್ಚರ್ಯಚಕಿತರಾಗಿದ್ದಾರೆ. ಈ ಗುರುದ್ವಾರ ಪಂಜಾಬ್‌ನ ಗುರುದಾಸ್‌ಪುರದಲ್ಲಿರುವ ಡೇರಾ ಬಾಬಾ ನಾನಕ್ ದೇವಸ್ಥಾನದಿಂದ ಸುಮಾರು 3 ಕಿ.ಮೀ. ದೂರದ ನರೋವಾಲ್ ಜಿಲ್ಲೆಯಲ್ಲಿದೆ.

- Advertisement -

ಸಿಖ್ ಧರ್ಮದಲ್ಲಿ ಸಿಗರೇಟ್ ಮತ್ತು ತಂಬಾಕು ಸೇವನೆಯನ್ನು ದೊಡ್ಡ ಪಾಪವೆಂದು ಭಕ್ತರು ಪರಿಗಣಿಸುತ್ತಾರೆ.

Join Whatsapp