ಗುರ್ಗಾಂವ್: ಭಾರತ್ ಮಾತಾ ಕಿ ಜೈ ಕೂಗುವಂತೆ ಮುಸ್ಲಿಮರನ್ನು ಬಲವಂತಪಡಿಸಿದ ಸಂಘಪರಿವಾರ

Prasthutha|

ಲಕ್ನೋ: ಗುರ್ಗಾಂವ್ ನಲ್ಲಿ ಶುಕ್ರವಾರದ ನಮಾಝ್ ಗೆ ಮತ್ತೆ ಅಡ್ಡಿಪಡಿಸಿದ ಸಂಘಪರಿವಾರದ ಕಾರ್ಯಕರ್ತರು ಮುಸ್ಲಿಮರು ಭಾರತದಲ್ಲಿ ಉಳಿಯಲು ಭಾರತ್ ಮಾತಾ ಕಿ ಜೈ ಕೂಗುವಂತೆ ಬಲವಂತಪಡಿಸಿದ್ದಾರೆ.

- Advertisement -

ಮುಸ್ಲಿಮರು ನಮಾಝ್ ನಿರ್ವಹಿಸುತ್ತಿದ್ದ ಸ್ಥಳಕ್ಕೆ ಆಗಮಿಸಿದ ಸಂಘಪರಿವಾರದ ಕಾರ್ಯಕರ್ತರು ನಮಾಝ್ ಗೆ ಅಡ್ಡಿಪಡಿಸಿದರಲ್ಲದೆ, ಮೆರೂನ್ ಶರ್ಟ್ ಹಾಕಿದ ವ್ಯಕ್ತಿಯೊಬ್ಬ ಭಾರತ್ ಮಾತ ಕಿ ಜೈ ಕೂಗುವಂತೆ ಕಿರುಚಾಡಿ ಬಲವಂತಪಡಿಸಿ ದಾಂಧಲೆ ನಡೆಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಮಾತ್ರವಲ್ಲ ಈ ಘೋಷಣೆ ಕೂಗದ ನೀವು ಪಾಕಿಸ್ತಾನದಲ್ಲಿ ವಾಸಿಸುತ್ತಿದ್ದೀರ ಎಂದು ಪ್ರಶ್ನಿಸುತ್ತಿರುವುದು ವೀಡಿಯೋದಲ್ಲಿ ಸೆರೆಯಾಗಿದೆ.

ಈ ಮಧ್ಯೆ ನಮಾಝ್ ಗೆ ಆಗಮಿಸಿದ ವ್ಯಕ್ತಿಯೊಬ್ಬ ಶಾಂತಿಯಿಂದ ನಮಾಝ್ ನಿರ್ವಹಿಸಲು ಅವಕಾಶ ನೀಡಬೇಕೆಂದು ಸಂಘಪರಿವಾರದ ಕಾರ್ಯಕರ್ತರಲ್ಲಿ ಮನವಿ ಮಾಡಿದರು. ಇದರಿಂದ ಕೆರಳಿದ ಸಂಘಪರಿವಾರದ ಕಾರ್ಯಕರ್ತರು ಭಾರತ್ ಮಾತಾ ಕಿ ಜೈ ಕೂಗಲೇ ಬೇಕೆಂದು ಬಲವಂತಪಡಿಸಿದಾಗ ಮುಸ್ಲಿಮರು ಹಿಂದೂಸ್ತಾನ್ ಝಿಂದಾಬಾದ್, ಮಹಾತ್ಮ ಗಾಂಧಿ ಕಿ ಜೈ, ಎಂಬಿತ್ಯಾದಿ ಘೋಷಣೆ ಕೂಗುತ್ತಿರುವ ದೃಶ್ಯ ವೀಡಿಯೋದಲ್ಲಿ ಗೋಚರಿಸಿದೆ.

- Advertisement -

ಶುಕ್ರವಾರದ ನಮಾಝ್ ಗೆ ಅಡ್ಡಿಪಡಿಸುತ್ತಿರುವ ಸಂಘಪರಿವಾರದ ಕ್ರಮವನ್ನು ವಿರೋಧಿಸಿ ಮುಸ್ಲಿಮರು ಸುಪ್ರೀಮ್ ಕೋರ್ಟ್ ಮೆಟ್ಟಿಲೇರಿದ್ದಾರೆ.

Join Whatsapp