ತಲೆಯಲ್ಲಿ ಮೆದುಳು ಇಲ್ಲದವನಿಂದ ಪತ್ರಿಕಾಗೋಷ್ಠಿಯಲ್ಲಿ ಶಾಸಕ ಖಾದರ್ ವಿರುದ್ಧ ಸುಳ್ಳಾರೋಪ: ಈಶ್ವರ್ ಉಳ್ಳಾಲ ಕಿಡಿ

Prasthutha|

ಮಂಗಳೂರು: ಶಾಸಕ ಯು.ಟಿ. ಖಾದರ್ ವಿರುದ್ಧ ಯಾರೋ ಒಬ್ಬ ತಲೆಯಲ್ಲಿ ಮೆದುಳು ಇಲ್ಲದವ ಪತ್ರಿಕಾಗೋಷ್ಠಿಯ ಮೂಲಕ ಸುಳ್ಳಾರೋಪ ಮಾಡಿದ್ದಾನೆ ಕಾಂಗ್ರೆಸ್ ನ ಹಿರಿಯ ಮುಖಂಡ ಈಶ್ವರ್ ಉಳ್ಳಾಲ್ ಕಿಡಿಕಾರಿದ್ದಾರೆ.

- Advertisement -

ಶಾಸಕ ಯು.ಟಿ.ಖಾದರ್ ವಿರುದ್ಧ ಸುಳ್ಳಾರೋಪವನ್ನು ವಿರೋಧಿಸಿ ಭಾನುವಾರ ಪತ್ರಿಕಾ ಹೇಳಿಕೆ ನೀಡಿದ ಈಶ್ವರ್ ಉಳ್ಳಾಲ ಅವರು ತಲೆಯಲ್ಲಿ ಮೆದುಳಿಲ್ಲದವ ಪತ್ರಿಕಾಗೋಷ್ಠಿಯ ಮೂಲಕ ಶಾಸಕ ಯು.ಟಿ ಖಾದರ್ ವಿರುದ್ಧ ಸುಳ್ಳಾರೋಪ ಮಾಡಿದ್ದಾನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆತ ಯಾವ ಕಾಂಗ್ರೆಸ್ ಪಕ್ಷದ ಕಾರ್ಯಕರ್ತ ಎಂದು ನನಗೆ ತಿಳಿದಿಲ್ಲ. ನಾವೆಲ್ಲ ಕಾಂಗ್ರೆಸ್ ನಲ್ಲಿದ್ದಾಗ ಆತ ಬಿಜೆಪಿಯಲ್ಲಿದ್ದ. ನಂತರ ಆತ ಯು.ಟಿ. ಖಾದರ್ ಅವರನ್ನು ತಂದೆ ಎಂದು ಕರೆದು ಕಾಂಗ್ರೆಸ್ ಸೇರ್ಪಡೆಗೊಂಡಿದ್ದನು. ಈ ಸಂದರ್ಭದಲ್ಲಿ ಆತ ವೈಯಕ್ತಿಕವಾಗಿ ಸಾಕಷ್ಟು ಭ್ರಷ್ಟಚಾರದ ಮೂಲಕ ದುಡ್ಡು ಮಾಡಿದ್ದಾನೆ. ಬ್ಲಾಕ್ ಕಾಂಗ್ರೆಸ್ ಹೆಸರು ಹೇಳಿಕೊಂಡು ಈತ ಎಂ. ಎಸ್. ಎಲ್ ನಲ್ಲಿ ಲಿಕ್ಕರ್ ಮಾರಾಟ ಏಜೆನ್ಸಿಯನ್ನು ಪಡೆದಿದ್ದನು. ಆದರೆ ಅದನ್ನು ದುರ್ಬಳಕೆ ಮಾಡಿ ಐದು ಲಕ್ಷಕ್ಕೆ ಮಾರಿದ್ದಾನೆ. ತನ್ನ ಹೊಟ್ಟೆಪಾಡಿಗಾಗಿ ಕಾಂಗ್ರೆಸ್ ನ ಹೆಸರು ಹೇಳಿಕೊಂಡು ತಿರುಗಾಡುತ್ತಿದ್ದ. ಕೆಲವರನ್ನು ಸೇರಿಸಿಕೊಂಡು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನೆಂದು ತಿರುಗಾಡುತ್ತಿದ್ದ. ಇದರ ಹೆಸರಿನಲ್ಲಿ ಸಾಕಷ್ಟು ಹಣವನ್ನು ದೋಚಿದ್ದಾನೆ ಎಂದು ಈಶ್ವರ್ ಉಳ್ಳಾಲ್ ಅರೋಪಿಸಿದ್ದಾರೆ.

Join Whatsapp