‘ಹರಕು ಬಾಯಿಗಳಿಗೆ ಹೊಲಿಗೆ ಬೀಳಲಿ’: ಈಶ್ವರಪ್ಪಗೆ ಟಾಂಗ್ ನೀಡಿದ ಬಿಜೆಪಿ MLC ಆಯನೂರು ಮಂಜುನಾಥ್

Prasthutha|

ಶಿವಮೊಗ್ಗ: ‘ಹರಕು ಬಾಯಿಗಳಿಗೆ ಹೊಲಿಗೆ ಬೀಳಲಿ’ ಎಂದು ಬಿಜೆಪಿ MLC ಆಯನೂರು ಮಂಜುನಾಥ್ ಫ್ಲೆಕ್ಸ್ ಹಾಕಿಸಿದ್ದಾರೆ. ಇದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪಗೆ ಟಾಂಗ್ ನೀಡಲು ಆಯನೂರು ಹಾಕಿಸಿದ್ದಾರೆ ಎನ್ನಲಾಗಿದೆ.

- Advertisement -


ಆಯನೂರು ಮಂಜುನಾಥ್ ಅವರು ಯುಗಾದಿ ಹಾಗೂ ರಂಝಾನ್ ಹಬ್ಬಕ್ಕೆ ಶುಭಾಶಯ ಫ್ಲೆಕ್ಸ್’ನಲ್ಲಿ ಹರಕು ಬಾಯಿಗಳಿಗೆ ಹೊಲಿಗೆ ಬೀಳಲಿ.., ಮುರಿದ ಮನಸುಗಳ ಬೆಸುಗೆಯಾಗಲಿ. ಶಿವಮೊಗ್ಗದಲ್ಲಿ ಶಾಂತಿ ಸೌಹಾರ್ದತೆ ನೆಲೆಸಲಿ ಎಂದು ಫ್ಲೆಕ್ಸ್ ನಲ್ಲಿ ಬರೆಸಿದ್ದು, ಇದು ಈಶ್ವರಪ್ಪ ವಿರುದ್ಧ ಪರೋಕ್ಷವಾಗಿ ಬರೆಯಲಾಗಿದೆ ಎಂದು ಹೇಳಲಾಗುತ್ತಿದೆ.


ಆಯನೂರು ಮಂಜುನಾಥ್ ಈ ಹಿಂದಿನಿಂದಲೂ ಈಶ್ವರಪ್ಪ ವಿರುದ್ಧ ಸಮರ ಸಾರಿಕೊಂಡು ಬರುತ್ತಿದ್ದಾರೆ.
ಈ ಮಧ್ಯೆ ಆಯನೂರು ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಂಡು ಈಶ್ವರಪ್ಪ ವಿರುದ್ಧ ಕಣಕ್ಕಿಳಿಸಲು ಕಾಂಗ್ರೆಸ್ ನಾಯಕರು ಯತ್ನ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

Join Whatsapp