ಒಡಿಶಾ | ಬಿಜೆಪಿ ನಾಯಕ ಬೈಜಯಂತ್ ಪಾಂಡಾರ ನ್ಯೂಸ್ ಚಾನೆಲ್ ನ ಸಿಎಫ್ ಒ ಬಂಧನ

Prasthutha|

ಭುವನೇಶ್ವರ : ಒಡಿಶಾ ಬಿಜೆಪಿ ಮುಖಂಡ ಬೈಜಯಂತ್ ಕುಟುಂಬ ಮಾಲಕತ್ವದ ‘ಒ ಟಿವಿ’ಯ ಮುಖ್ಯ ಹಣಕಾಸು ಅಧಿಕಾರಿ ಮನೋರಂಜನ್ ಸಾರಂಗಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಪರಿಶಿಷ್ಟ ಜಾತಿಗೆ ಸೇರಿದ ಕೆಲ ವ್ಯಕ್ತಿಗಳು ಒಡಿಶಾ ಪೊಲೀಸ್ ನ ಆರ್ಥಿಕ ಅಪರಾಧಗಳ ವಿಭಾಗ ಈ ಕ್ರಮ ಕೈಗೊಂಡಿದೆ.

- Advertisement -

ಅಕ್ರಮವಾಗಿ ಭೂಮಿ ಖರೀದಿಸಿದ ಆರೋಪದಲ್ಲಿ ಈ ಬಂಧನ ನಡೆದಿದೆ. ಖುರ್ದಾ ಜಿಲ್ಲೆಯ ಬೆಗುನಿಯಾ ತಾಲೂಕಿನ ಸರೂವಾ ಗ್ರಾಮದಲ್ಲಿ ಒಡಿಶಾ ಇನ್ ಫ್ರಾಟೆಕ್ ಪ್ರೈವೆಟ್ ಲಿಮಿಟೆಡ್ ಅಕ್ರಮವಾಗಿ ಭೂಮಿ ಖರೀದಿಸಲಾಗಿದೆ ಎಂದು ಆರೋಪಿಸಲಾಗಿದೆ. ಸಾರಂಗಿ ಕಂಪೆನಿಯ ನಿರ್ದೇಶಕರೂ ಆಗಿದ್ದಾರೆ.

“ಒಡಿಶಾ ಇನ್ ಫ್ರಾಟೆಕ್ ಪ್ರೈವೆಟ್ ಲಿಮಿಟೆಡ್ ಎಂಬ ಕಂಪೆನಿ ಪರಿಶಿಷ್ಟ ಜಾತಿಯರವಿಗೆ ಸೇರಿದ ಭೂಮಿಯನ್ನು ಅವರಿಗೆ ನಷ್ಟ ಮಾಡುವ ಉದ್ದೇಶದಿಂದ, ನಿಯಮಾವಳಿ ಉಲ್ಲಂಘಿಸಿ ಖರೀದಿಸಲಾಗಿದೆ’’ ಎಂದು ಆರ್ಥಿಕ ಅಪರಾಧಗಳ ವಿಭಾಗದ ಹೇಳಿಕೆಯಲ್ಲಿ ತಿಳಿಸಲಾಗಿದೆ.

Join Whatsapp