ಬಿಹಾರ: ಕೃಷಿ ಮಸೂದೆ ವಿರೋಧಿ ಪ್ರತಿಭಟನಾಕಾರರ ಮೇಲೆ ಬಿಜೆಪಿ ಗೂಂಡಾಗಳಿಂದ ದಾಳಿ

Prasthutha|

ಪಾಟ್ನಾ: ಬಿಹಾರ ವಿಧಾನ ಸಭಾ ಚುನಾವಣೆಯ ದಿನಾಂಕ ಘೋಷಣೆಯಾಗಿರುವಂತೆ ಬಿಜೆಪಿ ಬೆಂಬಲಿಗರೆಂದು ಹೇಳಲಾಗುವ ವ್ಯಕ್ತಿಗಳು ಪಾಟ್ನಾದಲ್ಲಿ ಜನ ಅಧಿಕಾರ ಪಕ್ಷ (ಜೆ.ಎ.ಪಿ)ದ ಸದಸ್ಯರ ಮೇಲೆ ಹಲ್ಲೆ ನಡೆಸಿರುವುದು ವರದಿಯಾಗಿದೆ. ಈ ಕುರಿತಾಗಿನ ವೀಡಿಯೋ ಒಂದು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ. ಜೆ.ಎ.ಪಿ ನಾಯಕ ರಾಜೇಶ ರಂಜನ್ ಯಾನೆ ಪಪ್ಪು ಯಾದವ್  ಕೃಷಿ ಮಸೂದೆಯನ್ನು ವಿರೋಧಿಸಿ ಪಾಟ್ನಾದಲ್ಲಿ ಟ್ರ್ಯಾಕ್ಟರ್ ರಾಲಿ ನಡೆಸುತ್ತಿದ್ದ ವೇಳೆ ಈ ದಾಳಿ ನಡೆದಿದೆ ಎನ್ನಲಾಗಿದೆ.

- Advertisement -

ರ‍್ಯಾಲಿಯ ವೇಳೆ ಜೀಪ್‌ನಲ್ಲಿದ್ದ ಅವರ ಬೆಂಬಲಿಗರಲ್ಲೊಬ್ಬರು ವೀರಚಂದ್ ಪಟೇಲ್ ರೋಡ್‌ನಲ್ಲಿರುವ ಬಿ.ಜೆ.ಪಿ ಕಚೇರಿಯ ಮುಂಭಾಗದಲ್ಲಿ ಹೋಗುತ್ತಿದ್ದರು. ಟ್ರಾಫಿಕ್ ಜಾಮ್ ನಲ್ಲಿ ವಾಹನವು ಸಿಲುಕಿದ್ದಾಗ‌ ಕೆಲವು ವ್ಯಕ್ತಿಗಳು ಆತನನ್ನು ಲಾಠಿಯಿಂದ ಬಡಿಯಲು ಪ್ರಾರಂಭಿಸಿದ್ದರು. ದಾಳಿಕೋರರು ‘ನರೇಂದ್ರ ಮೋದಿ ಝಿಂದಾಬಾದ್’, ‘ಬಿಜೆಪಿ ಝಿಂದಾಬಾದ್’ ಎಂಬ ಘೋಷಣೆಗಳನ್ನೂ ಕೂಗುತ್ತಿದ್ದರುವುದು ವೀಡಿಯೋದಲ್ಲಿ ದಾಖಲಾಗಿದೆ.

ರೈತರ ರ‍್ಯಾಲಿಯ ವೇಳೆ ಮಾಜಿ ಶಾಸಕರೊಬ್ಬರು‌ ಬಿ.ಜೆ.ಪಿಯ ದಾಳಿಗೊಳಗಾಗಿದ್ದಾರೆ ಎಂಬುದಾಗಿ ಪಪ್ಪು ಯಾದವ್ ತಿಳಿಸಿದ್ದಾರೆ. “ಮಾಜಿ ಶಾಸಕ ರಾಮ ಚಂದ್ರ ಹಾಗೂ ಇಬ್ಬರು ಯುವ ನಾಯಕರಾದ ವಿಶಾಲ್ ಕುಮಾರ್ ಮತ್ತು  ಮನೀಷ್ ಗಾಯಗೊಂಡಿದ್ದು ಆಸ್ಪತ್ರೆಗೆ ಸೇರಿಸಲಾಗಿದೆ” ಎಂದು ಜನ ಅಧಿಕಾರ ಪಕ್ಷದ ಅಧಿಕೃತ ವಕ್ತಾರರು ತಿಳಿಸಿದ್ದಾರೆ.

- Advertisement -

” ಬಿಹಾರದಲ್ಲಿ ರೈತರು ಬಿ.ಜೆ.ಪಿಯನ್ನು ಹೂಳಲಿದ್ದಾರೆ. ದಾಳಿಯಲ್ಲಿ ನಮಗೆ ನೀಡಿದ ಪ್ರತೀ ಪ್ರಹಾರಕ್ಕೆ ಜನರು ಸೇಡು ತೀರಿಸಿಕೊಳ್ಳಲಿದ್ದಾರೆ” ಎಂಬುದಾಗಿ ಪಪ್ಪು ಹೇಳಿದ್ದಾರೆ.

ರೈತ ಪರ ಪ್ರತಿಭಟನೆಕಾರರ ಮೇಲೆ ಬಿಜೆಪಿ ಗೂಂಡಾಗಳ ದಾಳಿ

ರೈತ ವಿರೋಧಿ ಕರಾಳ ಕಾಯ್ದೆಯನ್ನು ವಿರೋಧಿಸಿ ಪ್ರತಿಭಟಿಸುತ್ತಿದ್ದ ಬಿಹಾರದ ಅನ್ನದಾತರ ಮೇಲೆ ಪೊಲೀಸರ ಸಮ್ಮುಖದಲ್ಲೇ ಬಿಜೆಪಿಯ ಗೂಂಡಾಗಳಿಂದ ದಾಳಿ ! ಮೋದಿಗೆ ಝಿಂದಾಬಾದ್ ಕೂಗುತ್ತಿರುವ ಗೂಂಡಾಗಳು !

Posted by Prasthuta on Saturday, September 26, 2020
Join Whatsapp