ದ್ವೇಷ ಹರಡುವವರ ವಿರುದ್ಧ, ಸಂವಿಧಾನದ ರಕ್ಷಣೆಗಾಗಿ ಭಾರತ್ ಜೋಡೋ ಯಾತ್ರೆ: ರಾಹುಲ್ ಗಾಂಧಿ

Prasthutha|

ಸಂವಿಧಾನ ಇಲ್ಲ ಅಂದರೆ ರಾಷ್ಟ್ರ ಧ್ವಜಕ್ಕೆ ಬೆಲೆ ಇಲ್ಲ: ರಾಹುಲ್ ಎಚ್ಚರಿಕೆ

- Advertisement -


ಬೆಂಗಳೂರು: ಆರ್ ಎಸ್ ಎಸ್ ನ ದ್ವೇಷ ಹರಡುವಿಕೆ ವಿರುದ್ಧ ಮತ್ತು ಸಂವಿಧಾನದ ರಕ್ಷಣೆಗಾಗಿ ಭಾರತ್ ಜೋಡೋ ಯಾತ್ರೆಯನ್ನು ಆರಂಭಿಸಲಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.


ಗುಂಡ್ಲುಪೇಟೆಯಲ್ಲಿ ನಡೆದ ಪಾದಯಾತ್ರೆ ಉದ್ಘಾಟನೆ ಸಮಾವೇಶದಲ್ಲಿ ಮಾತನಾಡಿದ ಅವರು, ಸಂವಿಧಾನ ಇಲ್ಲ ಅಂದರೆ ರಾಷ್ಟ್ರ ಧ್ವಜಕ್ಕೆ ಬೆಲೆ ಇಲ್ಲ. ಮಳೆ, ಬಿಸಿಲು ಇದ್ದರೂ ನಿರಂತರ ಪಾದಯಾತ್ರೆ ನಡೆಯುತ್ತಿದ್ದೇವೆ. ಲಕ್ಷಾಂತರ ಜನರು ಭಾಗಿಯಾಗಿ ಹುರುಪು ನೀಡುತ್ತಿದ್ದಾರೆ ಎಂದರು.

- Advertisement -


ದ್ವೇಷ, ಹಿಂಸೆ ಎಲ್ಲೂ ಈ ಯಾತ್ರೆಯಲ್ಲಿ ಕಾಣಲ್ಲ. ಈ ಯಾತ್ರೆಯಲ್ಲಿ ಎಲ್ಲ ಧರ್ಮ, ಭಾಷೆಯವರು ಭಾಗಿಯಾಗಿದ್ದಾರೆ. ಪಾದಯಾತ್ರೆಯಲ್ಲಿ ಜಾತಿ, ಧರ್ಮ ಪ್ರಶ್ನೆ ಮಾಡದೆ ಸಹಾಯ ಮಾಡಲು ಮುಂದಾಗುತ್ತಾರೆ. ಇದೇ ನಮ್ಮ ಸುಂದರವಾದ, ಶಾಂತಿಯ, ಸೌಹಾರ್ದತೆಯ ಭಾರತ ಎಂದು ಹೇಳಿದರು.


ಭಾರತದ ಯಾತ್ರೆ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಡೆಯಲಿದೆ. ಯಾವುದೇ ಶಕ್ತಿ ಪಾದಯಾತ್ರೆಯನ್ನು ನಿಲ್ಲಿಸಲು ಸಾಧ್ಯವಿಲ್ಲ. ದಾರಿಯುದ್ದಕ್ಕೂ ಜನರು ಭೇಟಿ ಮಾಡಿ ನೋವು, ನಿರುದ್ಯೋಗ, ಬೆಲೆ ಏರಿಕೆ, ರೈತರ ಮೇಲೆ ಆಗುತ್ತಿರುವ ಅನ್ಯಾಯದ ಬಗ್ಗೆ ತಿಳಿಸುತ್ತಿದ್ದಾರೆ. ಜನರು ತಮ್ಮ ನೋವು, ದುಃಖಗಳನ್ನು ಹೇಳುತ್ತಿದ್ದಾರೆ. ಕರ್ನಾಟಕದಲ್ಲಿ ನಡೆಯುತ್ತಿರುವ 40% ಕಮಿಷನ್ ಭ್ರಷ್ಟಾಚಾರ, ರೈತರಿಗೆ, ಬಡವರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಚರ್ಚೆ ಆಗಲಿದೆ ಎಂದು ತಿಳಿಸಿದರು.

Join Whatsapp