ಬಸ್ತಾರ್ ನಲ್ಲಿ ಸ್ಫೋಟ: ಐಟಿಬಿಪಿ ಅಧಿಕಾರಿ ಸಾವು

Prasthutha|

ಛತ್ತೀಸಗಡ್: ಬಸ್ತಾರ್ ವಲಯದಲ್ಲಿ ನೆಲ ಬಾಂಬ್ ಸ್ಫೋಟಗೊಂಡು ಐಟಿಬಿಪಿ- ಇಂಡಿಯಾ ಟಿಬೆಟ್ ಗಡಿ ಪೊಲೀಸ್ ಪಡೆಯ ಇನ್ಸ್ ಪೆಕ್ಟರ್ ಒಬ್ಬರು ಸಾವನ್ನಪ್ಪಿದ್ದಾರೆ.

- Advertisement -

ಸೋಮವಾರ ಬೆಳಿಗ್ಗೆ ಈ ಸ್ಫೋಟ ನಡೆದಿದ್ದು ಸುಧಾರಿತ ಸ್ಫೋಟಕಗಳನ್ನು ಬಳಸಿ ನೆಲದಡಿ ಹೂಳಲಾಗಿತ್ತು. ಸ್ಪಷ್ಟವಾಗಿ ಯಾರು ಇಟ್ಟಿದ್ದರು ಎಂದು ತಿಳಿದಿಲ್ಲವಾದರೂ ಮಾವೋವಾದಿಗಳು ಈ ಸ್ಫೋಟಕ ಇಟ್ಟಿರಬಹುದು ಎಂದು ಶಂಕಿಸಲಾಗಿದೆ.

ಅಧಿಕಾರಿ ಇನ್ಸ್ ಪೆಕ್ಟರ್ ಜನರಲ್ ಸುಂದರ್ ರಾಜ್ ಪಿ. ಅವರು. ಕೆಲವು ಸಿಬ್ಬಂದಿ ಗಾಯಗೊಂಡಿದ್ದು, ಅವರನ್ನು ರಾಯ್ಪುರ ಆಸ್ಪತ್ರೆಗೆ ಕೂಡಲೆ ಕರೆದೊಯ್ಯಲಾಯಿತು. ಬಸ್ತಾರ್ ನ ನಾರಾಯಣಪುರ ಜಿಲ್ಲೆಯಲ್ಲಿ ಸ್ಫೋಟ ನಡೆದುದು ಎಂದು ತಿಳಿಸಿದ್ದಾರೆ.

- Advertisement -

ಎಎಸ್ಐ ರಾಜೇಂದ್ರ ಸಿಂಗ್ ಮತ್ತು ಕಾನ್ ಸ್ಟೇಬಲ್ ರಾಜೇಂದ್ರ ಬೋರ್ಡೊ ತೀವ್ರ ಗಾಯಗೊಂಡಿದ್ದಾರೆ. ಸಿಂಗ್ ಉತ್ತರಾಖಂಡದ ತೆಹ್ರಿ ಜಿಲ್ಲೆಯವರು. ಬೋಡ್ರೊ ಮಹಾರಾಷ್ಟ್ರದವರು. 53ನೇ ಬೆಟಾಲಿಯನ್ ಇಲ್ಲಿ ರಸ್ತೆ ಸುರಕ್ಷತೆಗಾಗಿ ನಿಯೋಜನೆಗೊಂಡಿತ್ತು.

Join Whatsapp