ಮುಲ್ಕಿಯಲ್ಲಿ ಹಿಂದೂ ಯುವಕನ ಕೊಲೆಯತ್ನ | ರಕ್ಷಿಸಲೆತ್ನಿಸಿದ ಮುಸ್ಲಿಂ ಯುವಕರ ಮೇಲೂ ತಲವಾರು ದಾಳಿ ನಡೆಸಿದ ಸಂಘಪರಿವಾರ ಕಾರ್ಯಕರ್ತರು !

Prasthutha|

► ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿಲ್ಲದ ತಲವಾರು ಸದ್ದು!

- Advertisement -

ಮೂಲ್ಕಿ : ಇಲ್ಲಿನ ಕೋಲ್ನಾಡುವಿನಲ್ಲಿ ಸೋಮವಾರ ತಡರಾತ್ರಿ 11 ಗಂಟೆ ಸುಮಾರಿಗೆ ಸಂಘಪರಿವಾರ ಕಾರ್ಯಕರ್ತರು ತಲವಾರು ದಾಳಿ ನಡೆಸಿದ ಘಟನೆ ವರದಿಯಾಗಿದೆ. ದಾಳಿಗೊಳಗಾದ ಹಿಂದು ಯುವಕನ ನೆರವಿಗೆ ಧಾವಿಸಿದ ಸ್ಥಳೀಯ ಮುಸ್ಲಿಂ ಯುವಕರ ಮೇಲೂ ಸಂಘಪರಿವಾರ ಕಾರ್ಯಕರ್ತರು ತಲವಾರು ಬೀಸಿದ್ದಾರೆ.

ಕೋಲ್ನಾಡುವಿನಲ್ಲಿ ತಡರಾತ್ರಿ ಹಿಂದು ಯುವಕನೋರ್ವನೊಂದಿಗೆ ವಾಗ್ವಾದಕ್ಕಿಳಿದಿದ್ದ ಸಂಘಪರಿವಾರದ ಕಾರ್ಯಕರ್ತರು ಆತನ ಮೇಲೆ ಹಲ್ಲೆಗೆ ಮುಂದಾಗಿದ್ದರು. ಈ ವೇಳೆ ಸ್ಥಳೀಯ ಮುಸ್ಲಿಂ ಯುವಕರು ಆತನ ನೆರವಿಗೆ ಧಾವಿಸಿದ್ದಾರೆ. ಈ ಸಂದರ್ಭ ದಾಳಿಕೋರರು  ಮುಸ್ಲಿಮ್ ಯುವಕರ ಮೇಲೆಯೇ ತಲವಾರು ದಾಳಿ ನಡೆಸಿದ್ದಾರೆ. ಆದರೆ ಯುವಕರು ಸಮಯಪ್ರಜ್ಞೆಯಿಂದ  ದಾಳಿಯಿಂದ ತಪ್ಪಿಸಿಕೊಂಡಿದ್ದಾರೆ. ಯುವಕರು ತಕ್ಷಣವೇ ಈ ಬಗ್ಗೆ ಮುಲ್ಕಿ ಠಾಣೆಗೆ ಮಾಹಿತಿ ನೀಡಿದ್ದು , ಮೂವರನ್ನು ತಡರಾತ್ರಿಯೇ ಪೊಲೀಸರು ಬಂಧಿಸಿದ್ದಾರೆ.

- Advertisement -

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಲದಿನಗಳಿಂದ ಸಂಘಪರಿವಾರ ಕಾರ್ಯಕರ್ತರು ಅಮಾಯಕ ಯುವಕರ ಮೇಲೆ ದಾಳಿ ನಡೆಸುತ್ತಿರುವ ಪ್ರಕರಣ ವರದಿಯಾಗುತ್ತಿದ್ದು, ಇತ್ತೀಚೆಗೆ ವಿಶ್ವ ಹಿಂದು ಪರಿಷತ್ ತಮ್ಮ ಕಾರ್ಯಕರ್ತರಿಗೆ ನೀಡಿದ ತ್ರಿಶೂಲ ವಿತರಣೆಯಿಂದಾಗಿ ಇಂತಹ ಘಟನೆಗಳು ಮರುಕಳಿಸುತ್ತಿವೆ ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

Join Whatsapp