ಮೋದಿಯವರ ನೆತ್ತಿಗೆ ಸುಪ್ರೀಂಕೋರ್ಟ್ ಸುತ್ತಿಗೆಯಿಂದ ಬಾರಿಸಿದ್ದಕ್ಕೆ ಸ್ವಲ್ಪ ಬರ ಪರಿಹಾರ ಸಿಕ್ಕಿದೆ: ದೇವನೂರ ಮಹಾದೇವ

Prasthutha|

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರ ನೆತ್ತಿಗೆಗೆ ಸುಪ್ರೀಂಕೋರ್ಟ್ ಸುತ್ತಿಗೆಯಿಂದ ಬಾರಿಸಿದ್ದಕ್ಕೆ ಕೇಂದ್ರದಿಂದ ಕರ್ನಾಟಕಕ್ಕೆ 3,454 ರೂಪಾಯಿ ಬರ ಪರಿಹಾರ ಸಿಕ್ಕಿದೆ ಎಂದು ಸಾಹಿತಿ ದೇವನೂರ ಮಹಾದೇವ ಪ್ರತಿಕ್ರಿಯಿಸಿದ್ದಾರೆ.

- Advertisement -

ಕರ್ನಾಟಕ ಕೇಳಿದ್ದು 18,174 ಕೋಟಿ ರೂಪಾಯಿ. ಆದರೆ ಸುಪ್ರೀಂ ಕೋರ್ಟಿನ ಮಧ್ಯಪ್ರವೇಶದ ಬಳಿಕ ಇಷ್ಟು ಅಲ್ಪ ಸ್ವಲ್ಪ ಹಣ ಕೊಟ್ಟಿದ್ದಾರೆ. ಇದಕ್ಕೂ ಮೊದಲು ಮೋದಿ, ಅಮಿತ್ ಶಾ, ನಿರ್ಮಲಾ ಸೀತಾರಾಮನ್‌ ಮತ್ತು ಕರ್ನಾಟಕ ರಾಜ್ಯ ಬಿಜೆಪಿಯವರು ನವರಂಗಿ ಬಣ್ಣಬಣ್ಣದ ಆಟ ಆಡಿದರು. ಸುಪ್ರೀಂ ಕೋರ್ಟ್ನಲ್ಲಿ ಅವರ ಆಟ ನಡೆಯಲಿಲ್ಲ. ಅವರು ಈಗಲೂ ಸುಳ್ಳಿನ ಸುರುಸುರು ಬತ್ತಿ ಹಚ್ಚಬಹುದು. ಆದರೆ ಕರ್ನಾಟಕ ಜನತೆಗೆ ಸತ್ಯ ತಿಳಿದಿದೆ ಎಂಬ ನಂಬಿಕೆ ನನಗಿದೆ ಎಂದು ಹೇಳಿದ್ದಾರೆ.

ಈಗಾಲಾದರೂ ರಾಜ್ಯ ಬಿಜೆಪಿ ನಾಯಕರು ಮೋದಿ ಮುಂದೆ ಕೈ- ಬಾಯಿ ಕಟ್ಟಿಕೊಂಡು ನಿಲ್ಲುವ ಬದಲು ಕನಿಷ್ಠ ಬಾಯಿ ಬಿಡಲಿ. ಇಲ್ಲದಿದ್ದರೆ ಅವರಿಗೆ ಕರ್ನಾಟಕದವರು ಅನ್ನಿಸಿಕೊಳ್ಳುವ ಕನಿಷ್ಠ ಅರ್ಹತೆ ಇರುವುದಿಲ್ಲ ಎಂದು ದೇವನೂರ ಮಹಾದೇವ ಹೇಳಿದ್ದಾರೆ.

Join Whatsapp