ಹೈದರಾಬಾದಿನಲ್ಲೇ MIM ಮುಖಂಡ ಅಸದ್ ಖಾನ್ ಹತ್ಯೆ !

Prasthutha|

ಹತ್ಯೆಯಾದ ಪ್ರದೇಶ ಒವೈಸಿ ಭದ್ರಕೋಟೆ !

- Advertisement -

ಆಲ್ ಇಂಡಿಯಾ ಮಜ್ಲಿಸೇ ಇತ್ತಿಹಾದುಲ್ ಮುಸ್ಲಿಮೀನ್ ಪಕ್ಷದ ಮುಖಂಡನಾಗಿರುವ ಅಸದ ಖಾನ್ ಎಂಬುವವರನ್ನು ಹೈದರಾಬಾದಿನ ವಟ್ಟಪಲ್ಲಿ ಎಂಬಲ್ಲಿ ಕೊಲೆ ನಡೆಸಲಾಗಿದೆ. ಈ ಪ್ರದೇಶ್ ಅಸದುದ್ದೀನ್ ಒವೈಸಿಯ ಭದ್ರಕೋಟೆ ಎಂದೇ ಪರಿಗಣಿಸಲಾಗಿದೆ.

ಕೊಲೆಯಾಗಿರುವ ಅಸದ್ ಖಾನ್ ಕ್ರಿಮಿನಲ್ ಹಿನ್ನೆಲೆಯುಳ್ಳವನಾಗಿದ್ದು, ತನ್ನ ವಿರೋಧಿ ಗ್ಯಾಂಗಿನಿಂದ ಕೊಲೆಯಾಗಿದ್ದಾರೆ ಎಂದು ಪೊಲೀಸರ ಪ್ರಾಥಮಿಕ ಮಾಹಿತಿ ತಿಳಿಸಿದೆ. ಅಸದ್ ಖಾನ್ ತನ್ನ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವೇಳೆ ಮೈಲಾರಪುರ ಪೊಲೀಸ್ ಠಾಣೆಯ ಬಳಿ ಶಸ್ತ್ರ ಸಜ್ಜಿತರಾಗಿ ಬಂದಿದ್ದ ಗುಂಪೊಂದು ಕೊಚ್ಚಿ ಕೊಲೆಗೈದಿದೆ. ಅವರನ್ನು ಸಮೀಪದ ಉಸ್ಮಾನಿಯಾ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ವೈದ್ಯರು ಅವರನ್ನು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ಪೊಲೀಸರು ಪ್ರಕರಣ ದಾಖಲಿಸಿದ್ದು, ಹಂತಕರ ಬಂಧನಕ್ಕೆ ಬಲೆ ಬೀಸಿದ್ದಾರೆ

Join Whatsapp