‘ತಾಕತ್ತಿದ್ದರೆ ನನ್ನ ವಿರುದ್ಧ ದೂರು ಕೊಡಿ’ : ವಕೀಲ ಜಗದೀಶ್ ಸವಾಲು

Prasthutha|

ಬೆಂಗಳೂರು : ಕರ್ನಾಟಕದಲ್ಲಿ ವಕೀಲಿ ವೃತ್ತಿ ನಡೆಸಲು ಬಾರ್ ಕೌನ್ಸಿಲ್ ನಲ್ಲಿ ಹೆಸರನ್ನೇ ನೊಂದಾಯಿಸಿಲ್ಲ ಅಂತ ತೋಳಿನಲ್ಲಿ ತಾಕತ್ತಿದ್ದರೇ ನನ್ನ ವಿರುದ್ಧ ದೂರು ಕೊಡಿ ಎಂಬುದಾಗಿ ಸಿಡಿ ಸಂತ್ರಸ್ತೆ ಪರ ವಕೀಲ ಜಗದೀಶ್ ಸವಾಲು ಹಾಕಿದ್ದಾರೆ.

- Advertisement -

“ನಾನು ಕರ್ನಾಟಕ ಲಾ ಯುನಿವರ್ಸಿಟಿಯಲ್ಲಿ ಲಾ ಓದಿದ್ದು. ಬೆಂಗಳೂರು ಯೂನಿವರ್ಸಿಟಿಯಲ್ಲಿ ಅಲ್ಲ. ದೆಹಲಿ ಬಾರ್ ಕೌನ್ಸಿಲ್ ನಲ್ಲಿ ನಾನು ನೊಂದಾಯಿಸಿಕೊಂಡಿದ್ದೇನೆ. ಆಲ್ ಇಂಡಿಯಾ ಕೌನ್ಸಿಲ್ ನಲ್ಲಿ ಎಕ್ಸಾಂ ಬರೆದು ಪಾಸ್ ಆಗಿದ್ದೀನಿ. ತೋಳಿನಲ್ಲಿ ತಾಕತ್ತಿದ್ದರೇ ನನ್ನ ವಿರುದ್ಧ ದೂರು ಕೊಡಿ. ಅದಕ್ಕೆ ನಾನು ಉತ್ತರಿಸುತ್ತೇನೆ” ಎಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸವಾಲು ಹಾಕಿದ್ದಾರೆ.

ನನ್ನ ವಿರುದ್ಧ ದೂರು ಕೊಡೋಕೆ ಹೇಳಿ. ವೈಯಕ್ತಿಕವಾಗಿ ನಾನು ಫೇಸ್ ಮಾಡುತ್ತೇನೆ. ಇದು ನನ್ನ ಚಾಲೆಂಜ್. ದಟ್ ಈಸ್ ಜಗದೀಶ್ ಎಂದು ತಿಳಿಸಿದ್ದಾರೆ.

Join Whatsapp