ಬಿಜೆಪಿ ತೊರೆದು ಟಿ.ಎಮ್.ಸಿ. ಗೆ ಸೇರ್ಪಡೆಯಾದ ಬಿಜೆಪಿ ಶಾಸಕ ಸೌಮೆನ್ ರಾಯ್

Prasthutha|

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಆಯೋಗ ಉಪ ಚುನಾವಣೆ ದಿನಾಂಕ ಘೋಷಿಸಿದ ನಡುವೆಯೇ ಬಿಜೆಪಿ ಶಾಸಕ ಸೌಮೆನ್ ರಾಯ್ ಅವರು ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡಿದ್ದಾರೆ.

- Advertisement -

ಕಲಿಯಗಂಜ್ ಬಿಜೆಪಿ ಶಾಸಕರರಾದ ಸೌಮೆನ್ ರಾಯ್ ಈ ಹಿಂದೆ ಟಿ.ಎಮ್.ಸಿ ಸದಸ್ಯರಾಗಿದ್ದರು. ಬಂಗಾಳ ಮತ್ತು ಉತ್ತರ ಬಂಗಾಳದ ಅಭಿವೃದ್ಧಿಯ ಹಿನ್ನೆಲೆಯಲ್ಲಿ ಅವರು ನಮ್ಮೊಂದಿಗೆ ಸೇರಿಕೊಳ್ಳುತ್ತಿದ್ದಾರೆ ಎಂದು ಟಿ.ಎಮ್.ಸಿ ನಾಯಕ ಪಾರ್ಥ ಚಟರ್ಜಿ ತಿಳಿಸಿದರು.

ಬಂಗಾಳದ ಸಂಸ್ಕ್ರತಿ ಮತ್ತು ಪರಂಪರೆಯನ್ನು ಜೀವಂತವಿರಿಸುವ ನಿಟ್ಟಿನಲ್ಲಿ ಸೌಮೆನ್ ರಾಯ್ ಕಾರ್ಯಯೋಜನೆ ರೂಪಿಸಲಿದ್ದಾರೆ ಎಂದು ಚಟರ್ಜಿ ತಿಳಿಸಿದರು.

Join Whatsapp