‘ಅಗ್ನಿಪಥ್’ ಭಾರತೀಯ ಸೇನೆಯನ್ನೇ ನಾಶ ಮಾಡಲಿದೆ: ಎಚ್ಚರಿಸಿದ ಪ್ರಿಯಾಂಕಾ ಗಾಂಧಿ

Prasthutha|

ನವದೆಹಲಿ: ಕೇಂದ್ರ ಸರಕಾರ ಜಾರಿಗೆ ತಂದಿರುವ ಅಗ್ನಿಪಥ್ ಯೋಜನೆಯ ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳು ತೀವ್ರ ಸ್ವರೂಪ ಪಡೆಯುತ್ತಿದೆ. ಬಿಹಾರ, ತೆಲಂಗಾಣ ಸೇರಿದಂತೆ ಹಲವು ರಾಜ್ಯಗಳಲ್ಲಿ ಯುವಜನತೆ ಸರಕಾರದ ವಿರುದ್ಧ ಬೀದಿಗಿಳಿದಿದ್ದಾರೆ. ಇದೀಗ ಕೇಂದ್ರದ ಯೋಜನೆಯ ಬಗ್ಗೆ ಎಚ್ಚರಿಸಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ, ಅಗ್ನಿಪಥ್’ ಯೋಜನೆಯು ಭಾರತೀಯ ಸೇನೆಯನ್ನು ನಾಶಮಾಡಲಿದೆ ಎಂದಿದ್ದಾರೆ.

- Advertisement -

ಈ ಕುರಿತು ಮಾತನಾಡಿರುವ ಪ್ರಿಯಾಂಕಾ, ಅಗ್ನಿಪಥ್ ಯೋಜನೆಯು ದೇಶದ ಯುವಕರನ್ನು ಕೊಲ್ಲಲಿದೆ, ಭಾರತೀಯ ಸೇನೆಯನ್ನು ನಾಶ ಮಾಡಲಿದೆ. ಈ ಸರಕಾರದ ಉದ್ದೇಶವನ್ನು ನಾವು ಗಮನಿಸಿಕೊಂಡು ಪ್ರಜಾಸತ್ತಾತ್ಮಕ, ಶಾಂತಿಯುತ ಮತ್ತು ಅಹಿಂಸಾತ್ಮಕ ಮಾರ್ಗಗಳ ಮೂಲಕ ಇವರನ್ನು ಕಿತ್ತೆಸಯಬೇಕಾಗಿದೆ ಎಂದು ಹೇಳಿದ್ದಾರೆ.

ಪ್ರತಿಭಟನಾಕಾರರು ಯಾವುದೇ ಕಾರಣಕ್ಕೂ ತಮ್ಮ ಹೋರಾಟ ನಿಲ್ಲಿಸದಂತೆ ಮನವಿ ಮಾಡಿರುವ ಪ್ರಿಯಾಂಕಾ, ಶಾಂತಿಯುತವಾಗಿ ತಮ್ಮ ಆಂದೋಲನವನ್ನು ಮುಂದುವರಿಸಿಕೊಂಡು ಸರ್ಕಾರವನ್ನು ಪತನಗೊಳಿಸಬೇಕು ಎಂದು ಕರೆ ನೀಡಿದ್ದಾರೆ.

Join Whatsapp