ಮೋದಿಯಿಂದ ಪ್ರಗತಿ ಮೈದಾನ್ ಸುರಂಗ ಮಾರ್ಗ ಉದ್ಘಾಟನೆ: ಪಕ್ಕದಲ್ಲೇ ಬಿದ್ದಿದ್ದ ಬಾಟಲಿ ಹೆಕ್ಕಿದ ಪ್ರಧಾನಿ

Prasthutha|

ನವದೆಹಲಿ: ಇಂದು ಉದ್ಘಾಟನೆಗೊಂಡ ದೆಹಲಿಯ ಪ್ರಗತಿ ಮೈದಾನ್ ಸುರಂಗ ಮಾರ್ಗ ಸಾರ್ವಜನಿಕ ಪ್ರವೇಶಕ್ಕೆ ಮುಕ್ತವಾಗಿದೆ. ಪ್ರಗತಿ ಮೈದಾನ್ ಸುರಂಗವನ್ನು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಉದ್ಘಾಟಿಸಿದ್ದು ಇದೇ ವೇಳೆ ಸುರಂಗ ಮಾರ್ಗವನ್ನು ಅವರು ಪರಿಶೀಲಿಸಿದ್ದಾರೆ.

- Advertisement -

ಈ ಮಧ್ಯೆ ರಸ್ತೆಯ ಬದಿಯಲ್ಲಿ ಸಿಕ್ಕ ಕೆಲ ಚಿಂದಿ, ಖಾಲಿ ನೀರಿನ ಬಾಟಲಿಯನ್ನು ಪ್ರಧಾನಿ ಮೋದಿ ಕೈಯ್ಯಲ್ಲೇ ಎತ್ತಿಕೊಂಡು ಕಸದ ಡಬ್ಬಿಗೆ ಹಾಕಿದ್ದಾರೆ. ಪ್ರಧಾನಿ ಸುರಂಗ ಮಾರ್ಗ ಪರಿಶೀಲಿಸುವ ವೇಳೆ ಬಾಟಲಿಯನ್ನು ಹೆಕ್ಕುವ ವಿಡಿಯೊ ತುಣುಕನ್ನು ಎಎನ್​ಐ ಸುದ್ದಿ ಸಂಸ್ಥೆ ಹಂಚಿಕೊಂಡಿದೆ.

ಇಂಡಿಯಾ ಗೇಟ್​ನಿಂದ ಕೇಂದ್ರ ದೆಹಲಿಗೆ ಸಂಪರ್ಕ ಕಲ್ಪಿಸುವ ಪ್ರಗತಿ ಮೈದಾನ್ ಸುರಂಗ ಮಾರ್ಗವು 1.6 ಕಿಮೀ ಉದ್ದವಿದೆ.

Join Whatsapp