ದೇವರ ರಥ ಮುಟ್ಟಿದ ಆರೋಪ; ಪರಿಶಿಷ್ಟ ಜಾತಿಯವರ ಮೇಲೆ ಪೈಶಾಚಿಕತೆ ಮೆರೆದ ಲಿಂಗಾಯತರು

Prasthutha|

ರಾಯಚೂರು: ದೇವರ ರಥ ಮುಟ್ಟಿದ ಕಾರಣಕ್ಕೆ ಪರಿಶಿಷ್ಟ ಜಾತಿಯ ಯುವಕರ ಮೇಲೆ ಲಿಂಗಾಯತ ಸಮುದಾಯದ ಯುವಕರು ಹಲ್ಲೆ ಮಾಡಿದ ಘಟನೆ ಸಿಂಧನೂರು ತಾಲೂಕಿನ ತಿಡಿಗೋಳ ಗ್ರಾಮದಲ್ಲಿ ನಡೆದಿದೆ.

- Advertisement -


ಎರಡು ವಾರಗಳ ಹಿಂದೆ ನಡೆದ ಈ ಘಟನೆಯ ಸಂಧಾನಕ್ಕೆ ಹಲವು ಬಾರಿ ಅಧಿಕಾರಿಗಳು ಮತ್ತುಪೊಲೀಸರು ಪ್ರಯತ್ನಿಸಿದರೂ ಪರಿಶಿಷ್ಟ ಜಾತಿಯವರ ಮೇಲೆ ಬಹಿಷ್ಕಾರ ಮುಂದುವರಿದಿದ್ದು, ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.


‘ಗಿರಣಿ ಅಂಗಡಿಯಲ್ಲಿ ಹಿಟ್ಟು ಮತ್ತು , ಕಿರಾಣಿ ಅಂಗಡಿಯಲ್ಲಿ ವಸ್ತುಗಳನ್ನು ನೀಡುವುದಿಲ್ಲ, ಹೋಟೆಲ್‌ನಲ್ಲಿ ಚಹಾ ಕುಡಿಯಲು ಕೂಡ ನಿರ್ಬಂಧಿಸಲಾಗಿದೆ’ ಎಂದು ಪರಿಶಿಷ್ಟ ಜಾತಿಯವರು ಸಮಸ್ಯೆ ತೋಡಿಕೊಳ್ಳುತ್ತಿದ್ದಾರೆ.

Join Whatsapp