ಮುದುಡಿದ ಕಮಲ; ಬಿಜೆಪಿಯ ದುರಾಡಳಿತಕ್ಕೆ ತಕ್ಕ ಶಾಸ್ತಿ ಮಾಡಿದ ನಾಗ್ಪುರದ ನಾಗರಿಕರು

Prasthutha|

ನಾಗ್ಪುರ: ಬಿಜೆಪಿಯ ದುರಾಡಳಿತದ ವಿರುದ್ಧ ನಾಗ್ಪುರದ  ಜನರು ಅಸಮಾಧಾನ ವ್ಯಕ್ತಪಡಿಸಿ ಬಂಡೆದ್ದಿದ್ದಾರೆ. ಜಿಲ್ಲಾದ್ಯಂತ ಪಂಚಾಯತ್‌ ಸಮಿತಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಆರೆಸ್ಸೆಸ್‌ ನ ಪ್ರಮುಖ ಕಚೇರಿಯಿರುವಲ್ಲೇ ಶೂನ್ಯ ಮತ  ಸಂಪಾದಿಸುವ ಮೂಲಕ ಬಿಜೆಪಿ ಭಾರೀ ಮುಖಭಂಗಕ್ಕೊಳಗಾಗಿದೆ.

- Advertisement -

ಎರಡು ತಾಲೂಕುಗಳ ಹೊರತು ಯಾವುದೇ ಪಂಚಾಯತ್‌ನಲ್ಲಿಯೂ ಪ್ರಮುಖ ಸ್ಥಾನಗಳನ್ನು ಗಳಿಸಲು ಬಿಜೆಪಿಗೆ ಸಾಧ್ಯವಾಗಲಿಲ್ಲ. ಆದರೆ ಸಂಖ್ಯಾಬಲದ ಆಧಾರದ ಮೇಲೆ ಕಾಂಗ್ರೆಸ್‌ ಪಕ್ಷವು ಭರ್ಜರಿ ಗೆಲುವು ಸಾಧಿಸಿದೆ.

ಜಿಲ್ಲೆಯ 13 ಪಂಚಾಯತ್ ಸಮಿತಿಗಳ ಪೈಕಿ ನಾಗಪುರ ಗ್ರಾಮೀಣ, ಕಮ್ತಿ, ಸವನೆರ್, ಕಲಮೇಶ್ವರ ಪಾರ್ಶಿವಾಣಿ, ಉಮ್ರೇಡ್, ಮೌಡ, ಕುಹಿ, ಭಿವಾಪುರ  ಈ 9 ಪಂಚಾಯತ್ ಸಮಿತಿಗಳಲ್ಲಿ ಕಾಂಗ್ರೆಸ್ ಪಕ್ಷದ (INC) ಅಭ್ಯರ್ಥಿಗಳು  ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

- Advertisement -

ನಾರ್ಖೇಡ್, ಕಟೋಲ್ ಮತ್ತು ಹಿಂಗಾಣ  ಈ ಮೂರು ತಾಲೂಕುಗಳಲ್ಲಿ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ(NCP) ಅಭ್ಯರ್ಥಿಗಳು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.  ರಾಮ್‌ಟೆಕ್ ಪಂಚಾಯತ್ ಸಮಿತಿಯಲ್ಲಿ ಏಕನಾಥ ಶಿಂಧೆ ಬಣದ ಅಭ್ಯರ್ಥಿ ಅಧ್ಯಕ್ಷ ಪಟ್ಟ ಗಿಟ್ಟಿಸಿಕೊಂಡಿದ್ದಾರೆ.

Join Whatsapp