ಸೌದಿ ಅರೇಬಿಯಾದಲ್ಲಿ ಭೀಕರ ಅಪಘಾತ| ಕೇರಳ ಮೂಲದ ವ್ಯಕ್ತಿ ಮೃತ್ಯು

Prasthutha|

ಜುಬೈಲ್: ಸೌದಿ ಅರೇಬಿಯಾದಲ್ಲಿ ನಡೆದ ವಾಹನ ಅಪಘಾತದಲ್ಲಿ ಕೇರಳದ ಪತ್ತನಂತಿಟ್ಟ ಮೂಲದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.

- Advertisement -

ಕುವೈತ್‌ನಲ್ಲಿ ಉದ್ಯೋಗಿಯಾಗಿರುವ ತಿರುವಳ್ಳ ತಲವಾಡಿ ಮೂಲದ ಲಾಜಿ ಮಮ್ಮೂಟಿಲ್ ಚೆರಿಯಾನ್ (54) ಮೃತರು. ಅವರು ಕುವೈತ್‌ನ ಕೈಗಾರಿಕಾ ಸಂಸ್ಥೆಯಾದ ಎನ್‌ಬಿಟಿಸಿ ಕಂಪನಿಯಲ್ಲಿ ಜನರಲ್ ವರ್ಕ್ ವಿಭಾಗದ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದರು.

ಕೆಲಸದ ನಿಮಿತ್ತ ಸೌದಿ ಅರೇಬಿಯಾಕ್ಕೆ ಬಂದಿದ್ದ ಅವರು ಕುವೈತ್‌ಗೆ ಕಾರಿನಲ್ಲಿ ಹಿಂತಿರುಗುತ್ತಿದ್ದಾಗ ಪೂರ್ವ ಸೌದಿ ಅರೇಬಿಯಾದ ಜುಬೈಲ್ ಬಳಿಯ ಅಲ್-ಖಾಫ್ಜಿ ಬಳಿಯ ಅಬು ಹದರಿಯಾ ರಸ್ತೆಯಲ್ಲಿ ಅಪಘಾತ ಸಂಭವಿಸಿದೆ.
ಅಲ್ಖಾಫ್ಜಿ ಜನರಲ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿರುವ ಮೃತದೇಹವನ್ನು ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ನಂತರ ಅಂತ್ಯಕ್ರಿಯೆಗಾಗಿ ಊರಿಗೆ ತರಲಾಗುವುದು ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ.

Join Whatsapp