ಗದ್ದೆಗೆ ಉರುಳಿದ ಬಸ್: 40ಕ್ಕೂ ಹೆಚ್ಚು ಮಂದಿಗೆ ಗಾಯ

Prasthutha|

ಮೈಸೂರು: ಭತ್ತದ ಗದ್ದೆಗೆ ಕೆಎಸ್ ಆರ್ ಟಿಸಿ ಬಸ್ ಉರುಳಿ 40ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ತಾಲ್ಲೂಕಿನ ಕೆಸ್ತೂರು ಕೊಪ್ಪಲು ಗೇಟ್ ಬಳಿ ಸಂಭವಿಸಿದೆ.

- Advertisement -


ರಸ್ತೆಯಲ್ಲಿ ಚಲಿಸುತ್ತಿದ್ದ ಬಸ್ ಚಾಲಕನ ನಿಯಂತ್ರಣ ತಪ್ಪಿ ಉರುಳಿತು. ಬಸ್ ಬಿದ್ದ ರಭಸಕ್ಕೆ ಸೀಟುಗಳೆಲ್ಲ ಮುರಿದು ಒಂದರ ಮೇಲೊಂದು ಬಿದ್ದಿವೆ. ಚಾಲಕನ ಕೈ ಮುರಿದಿದ್ದು, ಕೆಲವು ಪ್ರಯಾಣಿಕರ ತಲೆಗೆ ತೀವ್ರ ಪೆಟ್ಟಾಗಿದೆ.

Join Whatsapp