ಸುಳ್ಯ- ಪಾಣತ್ತೂರು ಅಂತಾರಾಜ್ಯ ಹೆದ್ದಾರಿಯಲ್ಲಿ ಲಾರಿ ಪಲ್ಟಿ: ನಾಲ್ವರು ಕಾರ್ಮಿಕರು ಸಾವು

Prasthutha|

ಸುಳ್ಯ: ರಬ್ಬರ್ ಮರದ ದಿಮ್ಮಿಗಳನ್ನು ಹೇರಿಕೊಂಡು ಹೋಗುತ್ತಿದ್ದ ಲಾರಿಯೊಂದು ಬ್ರೇಕ್ ವೈಫಲ್ಯಗೊಂಡು ರಸ್ತೆಯಂಚಿಗೆ ಪಲ್ಟಿಯಾದ ಪರಿಣಾಮ ನಾಲ್ವರು ಮೃತಪಟ್ಟ ದಾರುಣ ಘಟನೆ ಸುಳ್ಯ- ಪಾಣತ್ತೂರು ಅಂತಾರಾಜ್ಯ ಹೆದ್ದಾರಿಯ ಪೆರಿಯಾರಂ ಎಂಬಲ್ಲಿ ಸಂಭವಿಸಿದೆ.

- Advertisement -

ಲಾರಿ ಬ್ರೇಕ್ ವೈಫಲ್ಯಗೊಂಡ ವೇಳೆ ಒಟ್ಟು 9 ಮಂದಿ ಕಾರ್ಮಿಕರು ಮರದ ದಿಮ್ಮಿಗಳ ಮೇಲೆ ಕುಳಿತುಕೊಂಡಿದ್ದರು, ಲಾರಿ ಪಲ್ಟಿಯಾಗುವ ಮುನ್ಸೂಚನೆ ದೊರೆಯುತ್ತಲೇ ಒಂದಿಬ್ಬರು ಕಾರ್ಮಿಕರು ಹಾರಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮರದ ದಿಮ್ಮಿಗಳ ಅಡಿಯಲ್ಲಿ ಸಿಲುಕಿದ್ದ ನಾಲ್ವರು ಕಾರ್ಮಿಕರು ಮೃತಪಟ್ಟಿದ್ದಾರೆ. ಅಪಘಾತ ನಡೆದ ಸುದ್ದಿ ತಿಳಿಯುತ್ತಲೇ ಸ್ಥಳದಲ್ಲಿ ಸೇರಿದ್ದ ಸ್ಥಳೀಯರು ಮರದ ದಿಮ್ಮಿಗಳ ನಡುವೆ ಸಿಲುಕಿದ್ದ ಕಾರ್ಮಿಕರನ್ನು ಕಾಂಙಾಂಗಾಡ್ ಬಳಿಯ ಪೊಡುಂಗಲ್ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.

ಕೆಲ ತಿಂಗಳುಗಳ ಹಿಂದೆ ಇದೇ ರಸ್ತೆಯಲ್ಲಿ ಮದುವೆ ದಿಬ್ಬಣದ ಬಸ್, ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ 8 ಮಂದಿ ಮೃತಪಟ್ಟು,ಹಲವು ಮಂದಿ ಗಾಯಗೊಂಡಿದ್ದರು.

Join Whatsapp