ಮಾಜಿ ಡಿಸಿ ಮನೆಗೆ ಎಸಿಬಿ ದಾಳಿ : ಮೂವತ್ತು ಎಕರೆ ಪ್ರಾಪರ್ಟಿ ರೆಕಾರ್ಡ್ಸ್ ಪತ್ತೆ

Prasthutha|

ಬೆಂಗಳೂರು: ಲಂಚ ಪಡೆದ ಆರೋಪದಲ್ಲಿ ಬೆಂಗಳೂರು ನಗರದ ಮಾಜಿ ಜಿಲ್ಲಾಧಿಕಾರಿ ಮಂಜುನಾಥ್ ಅವರ ಬಂಧನವಾಗಿತ್ತು. ಅವರ ಫ಼್ಲ್ಯಾಟ್ ಮೇಲೆ ಇಂದು ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ದಾಳಿ ವೇಳೆ 30 ಎಕರೆ ಆಸ್ತಿಯ ದಾಖಲೆ ಪತ್ರಗಳು ಪತ್ತೆಯಾಗಿವೆ ಎಂದು ತಿಳಿದು ಬಂದಿದೆ.

- Advertisement -

ಬೆಂಗಳೂರು ಗ್ರಾಮಾಂತರ ಭಾಗದಲ್ಲೇ 30 ಎಕರೆ ಜಾಗ ಹೊಂದಿರುವುದು ಪತ್ತೆಯಾಗಿದೆ.ಜೊತೆಗೆ ಸಂಬಂಧಿಕರ ಹೆಸರಿನಲ್ಲೂ ಕೋಟಿ ಕೋಟಿ ಆಸ್ತಿ ಮಾಡಿರುವುದು ಪತ್ತೆಯಾಗಿದೆ.

ಆಸ್ತಿಪತ್ರದ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದ್ದು, 12 ಬ್ಯಾಂಕ್ ಖಾತೆಗಳ ವಿವರಗಳನ್ನ ಕಲೆ ಹಾಕಿದ್ದಾರೆ. ಇದೇ ವೇಳೆ ಮಂಜುನಾಥ್ ಅವರು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ವ್ಯಯಿಸಿರುವ ಹಣದ ವಿವರ ಪಡೆಯುತ್ತಿದ್ಧಾರೆ.

- Advertisement -

ಎಸಿಬಿ ಡಿವೈಎಸ್ ಪಿ ಬಸವರಾಜ್ ಮುಗ್ಧಂ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ದಾಳಿ ವೇಳೆ ಇತರೆ
ಬೇನಾಮಿ ಪ್ರಾಪರ್ಟಿಗಳ ಬಗೆಗೂ‌ ಎಸಿಬಿ ಮಾಹಿತಿ ಕಲೆಹಾಕುತ್ತಿದ್ದಾರೆ.

Join Whatsapp