ರಾಜ್ಯಸಭೆಗೆ ಹರ್ಭಜನ್, ರಾಘವ್ ಚಡ್ಡಾ ಸೇರಿದಂತೆ ಎಎಪಿಯ ಐದು ಮಂದಿ ಆಯ್ಕೆ

Prasthutha|

ನವದೆಹಲಿ: ಆಮ್ ಆದ್ಮಿ ಪಕ್ಷವು (ಎಎಪಿ) ಕ್ರಿಕೆಟಿಗ ಹರ್ಭಜನ್ ಸಿಂಗ್, ಐಐಟಿ ದೆಹಲಿಯ ಅಸೋಸಿಯೇಟ್ ಪ್ರೊಫೆಸರ್ ಸಂದೀಪ್ ಪಾಠಕ್, ದೆಹಲಿ ಶಾಸಕ ರಾಘವ್ ಚಡ್ಡಾ, ಲವ್ಲಿ ಪ್ರೊಫೆಷನಲ್ ಯೂನಿವರ್ಸಿಟಿ (ಎಲ್‌ಪಿಯು) ಸಂಸ್ಥಾಪಕ ಮತ್ತು ಕುಲಪತಿ ಅಶೋಕ್ ಮಿತ್ತಲ್ ಮತ್ತು ಕೈಗಾರಿಕೋದ್ಯಮಿ ಸಂಜೀವ್ ಅರೋರಾ ಅವರನ್ನು ರಾಜ್ಯಸಭೆಯಲ್ಲಿ ತನ್ನ ಪ್ರತಿನಿಧಿಗಳಾಗಿ ಆಯ್ಕೆ ಮಾಡಿದೆ ಎಂದು ಸೋಮವಾರ ದೃಢಪಡಿಸಿದೆ.

- Advertisement -

ಪಂಜಾಬ್ ಅಸೆಂಬ್ಲಿ ಚುನಾವಣೆಯಲ್ಲಿ 92 ಸ್ಥಾನಗಳನ್ನು ಗೆದ್ದ ನಂತರ, ಪಂಜಾಬ್‌ ನ ಐದು ಸದಸ್ಯರ ಅವಧಿ ಶೀಘ್ರದಲ್ಲೇ ಕೊನೆಗೊಳ್ಳಲಿರುವ ಕಾರಣ ಮೇಲ್ಮನೆಗೆ ಐದು ಸದಸ್ಯರನ್ನು ನಾಮನಿರ್ದೇಶನ ಮಾಡುವ ಅವಕಾಶವನ್ನು ಎಎಪಿ ಪಡೆದುಕೊಂಡಿದೆ. ಸದಸ್ಯರನ್ನು ನಾಮನಿರ್ದೇಶನ ಮಾಡಲು ಸೋಮವಾರ ಕೊನೆಯ ದಿನವಾಗಿದ್ದು, ಮಾರ್ಚ್ 31 ರಂದು ಚುನಾವಣೆ ನಡೆಯಲಿದೆ.

Join Whatsapp