ಶಾಲಾ ಮಕ್ಕಳ ಫೀಸ್ ಇಳಿಸದಿದ್ದರೆ ಶಿಕ್ಷಣ ಸಚಿವರ ಮನಗೆ ಮುತ್ತಿಗೆ ಹಾಕುತ್ತೇವೆ: ಮೋಹನ್ ದಾಸರಿ

Prasthutha|

ಬೆಂಗಳೂರು: ಈ ದೇಶಕ್ಕೆ ಬೇಕಾಗಿರುವುದು ಶಿಕ್ಷಣ. ಮಕ್ಕಳೇ ಈ ದೇಶದ ಭವಿಷ್ಯ. ಶಿಕ್ಷಣಕ್ಕೆ ಒತ್ತು ಕೊಡದ ಶಿಕ್ಷಣ ಸಚಿವರು ಮನೆಗೆ ನಡೆಯಲಿ. ಶಾಲಾ ಮಕ್ಕಳ ಫೀಸ್ ಇಳಿಸದಿದ್ದರೆ ಶಿಕ್ಷಣ ಸಚಿವರ ಮನೆಗೆ ಮುತ್ತಿಗೆ ಹಾಕುತ್ತೇವೆ ಎಂದು ಆಮ್ ಆದ್ಮಿ ಪಕ್ಷದ ಬೆಂಗಳೂರು ನಗರ ಅಧ್ಯಕ್ಷ ಮೋಹನ್ ದಾಸರಿ ಹೇಳಿದ್ದಾರೆ.

- Advertisement -

ಅವರು ಬೆಂಗಳೂರಿನಲ್ಲಿ ಆಮ್ ಆದ್ಮಿ ಪಕ್ಷ ಹಮ್ಮಿಕೊಂಡ “ಫೀಸ್ ಇಳಿಸಿ ಮಕ್ಕಳ ಭವಿಷ್ಯ ಉಳಿಸಿ” ಎಂಬ ರಾಜ್ಯವ್ಯಾಪಿ ಸಹಿ ಸಂಗ್ರಹ ಮತ್ತು ಜಾಗೃತಿ ಅಭಿಯಾನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ರಾಜ್ಯ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಿಕ್ಷಣ ಸಚಿವರಿಗೆ ಮಕ್ಕಳ ಮೇಲೆ ಕಾಳಜಿಯಿಲ್ಲ. ಶಿಕ್ಷಣಕ್ಕೆ ಒತ್ತು ಕೊಡುತ್ತಿಲ್ಲ. ಖಾಸಗಿ ಶಾಲೆಗಳೊಂದಿಗೆ ಸುರೇಶ್ ಕುಮಾರ್ ಒಪ್ಪಂದ ಮಾಡಿಕೊಂಡಿದ್ದಾರೆ‌. ಪೋಷಕರು ಕಂಗಾಲಾಗಿರುವ ಈ ಸಮಯದಲ್ಲಿ ಅವರಿಗೆ ಹಣ ಪಾವತಿಸುವಂತೆ ಒತ್ತಾಯಿಸುತ್ತಿರುವ ಎಷ್ಟು ಸರಿ ಎಂದು ಪ್ರಶ್ನಿಸಿದ ಮೋಹನ್ ದಾಸರಿ, ಶಾಲಾ ಮಕ್ಕಳ ಫೀಸ್ 30% ಶೇಕಡಾ ಇಳಿಕೆ ಮಾಡುವಂತೆ ಒತ್ತಾಯಿಸಿದರು. ಒಂದು ವೇಳೆ ಇಳಿಕೆ ಮಾಡದಿದ್ದರೆ ಹೋರಾಟ ಮುಂದುವರಿಸುವುದಾಗಿ ಮತ್ತು ಶಿಕ್ಷಣ ಸಚಿವರ ಮನೆಗೆ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಸಿದ್ದಾರೆ.

- Advertisement -

ಈ ಸಂದರ್ಭ ಆಮ್ ಆದ್ಮಿ ಪಕ್ಷದ ಸಂಚಾಲಕ ಪೃಥ್ವಿ ರೆಡ್ಡಿ ಮತ್ತಿತರು ಉಪಸ್ಥಿತರಿದ್ದರು.

Join Whatsapp