ಸಚಿವ ಸ್ಥಾನಕ್ಕಾಗಿ ಯಾರೊಬ್ಬರೂ ಲಾಬಿ ಮಾಡುತ್ತಿಲ್ಲ; ಶೀಘ್ರವೇ ಸಂಪುಟ ರಚನೆ: ಸಿಎಂ ಬೊಮ್ಮಾಯಿ

Prasthutha|

ಬೆಂಗಳೂರು: ಅತಿ ಶೀಘ್ರದಲ್ಲೇ ಸಚಿವ ಸಂಪುಟ ರಚನೆ ಆಗಲಿದೆ ಅಂತಾ ನೂತನ ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದ ಬಳಿಕ ಮೊದಲ ಬಾರಿಗೆ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಸಂಪುಟಕ್ಕೆ ಸೇರಬೇಕಾದವರ ಯಾರೊಬ್ಬರ ಹೆಸರನ್ನೂ ನಾನು ಹೈಕಮಾಂಡ್ ಗೆ ನೀಡಿಲ್ಲ. ಶೀಘ್ರವಾಗಿ ಹೈಕಮಾಂಡ್ ನಿಂದಲೇ ಎಲ್ಲವೂ ನಿರ್ಧಾರವಾಗಲಿದೆ ಎಂದರು.

- Advertisement -

ಇನ್ನು ವಲಸಿಗ ಶಾಸಕರಿಗೆ ಸಚಿವ ಸ್ಥಾನ ನೀಡುವ ಕುರಿತು ಸಿಎಂ ಜೊತೆ ಮಾತನಾಡುತ್ತೇನೆ ಎಂದಿರುವ ಬಿಎಸ್ವೈ ಹೇಳಿಕೆಗೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ನಾನೂ ಈ ಬಗ್ಗೆ ಯಡಿಯೂರಪ್ಪ ಅವರ ಜೊತೆಗೆನೇ ಮಾತಾಡುವುದಾಗಿ ತಿಳಿಸಿದರು.

ಕಳಂಕಿತರನ್ನ ಸಂಪುಟದಿಂದ ದೂರವಿಡುವ ಬಗ್ಗೆ ಆರ್ ಎಸ್ಎಸ್ ನಿಂದ ನನಗೆ ಸಲಹೆ ಬಂದಿದ್ದಾಗಿ ನಾನೂ ದಿನಪತ್ರಿಕೆಯಲ್ಲಷ್ಟೇ ಓದಿದ್ದೇನೆ. ಸಚಿವ ಸ್ಥಾನಕ್ಕಾಗಿ ಯಾರೊಬ್ಬರೂ ಲಾಬಿ ಮಾಡುತ್ತಿಲ್ಲ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

Join Whatsapp