ಪಠ್ಯಪುಸ್ತಕ ಪರಿಷ್ಕರಣೆ | ಯಾವುದೇ ಪಕ್ಷದ ಸಿದ್ದಾಂತ ಹೇರುವುದಿಲ್ಲ: ಮಧು ಬಂಗಾರಪ್ಪ

Prasthutha|

ಸಾಗರ: ಪಠ್ಯಪುಸ್ತಕ ಪರಿಷ್ಕರಣೆ ವಿಷಯದಲ್ಲಿ ತಜ್ಞರ ಸಲಹೆ ಪಡೆದು ಮುಂದುವರೆಯಲಾಗುತ್ತಿದೆ. ಯಾವುದೇ ಪಕ್ಷದ ಸಿದ್ದಾಂತವನ್ನು ಪಠ್ಯದ ಮೇಲೆ ಹೇರುವುದಿಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.

- Advertisement -


ಈ ಬಗ್ಗೆ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿಕ್ಣಣ ಕ್ಷೇತ್ರದಲ್ಲಿ ಯಾವುದೇ ಬದಲಾವಣೆ ತರುವುದಿದ್ದರೂ ತಜ್ಞರ ಸಲಹೆ ಪಡದೆ ಮುಂದುವರೆಯುವುದಾಗಿ ತಿಳಿಸಿದರು.


ರಾಜ್ಯದಲ್ಲಿ ಕೊರತೆ ಇರುವ ಶಿಕ್ಷಕರ ನೇಮಕಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗವುದು ಎಂದರು.



Join Whatsapp