ಶೇಕಡಾ 95 ರಷ್ಟು ಭಾರತೀಯರಿಗೆ ಪೆಟ್ರೋಲ್ ಅಗತ್ಯವಿಲ್ಲ: ಇಂಧನ ಬೆಲೆಯೇರಿಕೆ ಕುರಿತು ಉ.ಪ್ರ ಸಚಿವರ ಹಾಸ್ಯಾಸ್ಪದ ಹೇಳಿಕೆ

Prasthutha|

ಲಕ್ನೋ: ಭಾರತದ ಶೇಕಡಾ 95 ರಷ್ಟು ಮಂದಿಗೆ ಪೆಟ್ರೋಲ್ ಅಗತ್ಯವಿಲ್ಲ ಮತ್ತು ಬೆರಳೆಣಿಕೆಯಷ್ಟು ಜನ ಮಾತ್ರ ನಾಲ್ಕು ಚಕ್ರದ ವಾಹನಗಳನ್ನು ಬಳಸುತಿದ್ದಾರೆ ಎಂದು ಉತ್ತರಪ್ರದೇಶದ ರಾಜ್ಯ ಸಚಿವ ಉಪೇಂದ್ರ ತಿವಾರಿ ಹಾಸ್ಯಾಸ್ಪದ ಹೇಳಿಕೆ ನೀಡಿದ್ದಾರೆ.

- Advertisement -

ಸತತ ಎರಡನೇ ದಿನಗಳಿಂದ ಪೆಟ್ರೋಲ್ ಮತ್ತು ಇಂಧನ ಬೆಲೆಯೇರಿಕೆ ಆಗುತ್ತಿರುವ ಕುರಿತು ಈ ಮೇಲಿನಂತೆ ಅವರು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದರು.

2014 ರಿಂದ ಸರ್ಕಾರ ನಿರಂತರ ಪೆಟ್ರೋಲ್ ಸೇರಿದಂತೆ ಅಗತ್ಯ ಬೆಲೆಯೇರಿಕೆ ನಿರ್ವಹಿಸುತ್ತಿರುವ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮೋದಿ ಮತ್ತು ಆದಿತ್ಯನಾಥ್ ಸರ್ಕಾರದ ಅವಧಿಯಲ್ಲಿ ಜನರ ತಲಾ ಆದಾಯ ದ್ವಿಗುಣವಾಗಿದೆ ಎಂದು ಅವರು ತಿಳಿಸಿದರು.

- Advertisement -

ಪ್ರತಿಯೊಬ್ಬರ ತಲಾ ಆದಾಯಕ್ಕೆ ಹೋಲಿಸಿದರೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ತುಂಬಾ ಕಡಿಮೆ ಎಂದು ಉತ್ತರಿಸಿ ನಗೆಪಾಟಲಿಗೀಡಾದರು.

Join Whatsapp