ಲವ್ ಜಿಹಾದ್ ಆರೋಪದ ನಾಲ್ವರು ಮುಸ್ಲಿಮರ ಮೇಲೆ ದಾಳಿ ನಡೆಸಿದ ಬಜರಂಗದಳ: ಸಂತ್ರಸ್ತರನ್ನೇ ಬಂಧಿಸಿದ ಮಧ್ಯಪ್ರದೇಶ ಪೊಲೀಸರು

Prasthutha|

ಇಂದೋರ್: ಮಧ್ಯಪ್ರದೇಶದ ಇಂದೋರ್ ನಲ್ಲಿ ನಡೆದ ಕಾಲೇಜು ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಸೇರಿದಂತೆ ನಾಲ್ವರು ಮುಸ್ಲಿಮರನ್ನು ಲವ್ ಜಿಹಾದ್ ಉತ್ತೇಜನ ಪ್ರಕರಣದಲ್ಲಿ ಬಂಧಿಸಲಾಗಿದೆ. ಇದಕ್ಕೂ ಬಂಧಿತರ ಮೇಲೆ ಬಜರಂಗದಳದ ಗೂಂಡಾ ಪಡೆ ಹಲ್ಲೆ ನಡೆಸಿ ಪೊಲೀಸರಿಗೊಪ್ಪಿಸಿತ್ತು.

- Advertisement -

ಆಕ್ಸ್ ಫರ್ಡ್ ಕಾಲೇಜಿನಲ್ಲಿ ನಡೆದ ಘರ್ಷಣೆಗೆ ಸಂಬಂಧಿದಂತೆ ಬಂಧಿತರಾದ ಅದ್ನಾನ್ ಶಾ, ಮುಹಮ್ಮದ್ ಉಮರ್, ಅಬ್ದುಲ್ ಖಾದಿರ್ ಮತ್ತು ಸೈಯ್ಯದ್ ಶಕೀಲ್ ಎಂಬವರನ್ನು 50 ಸಾವಿರ ಬಾಂಡ್ ನ ಆಧಾರದಲ್ಲಿ ಜಾಮೀನಿನ ಮೇಲೆ ಮ್ಯಾಜಿಸ್ಟ್ರೇಟ್ ನ್ಯಾಯಾಧೀಶರು ಬಿಡುಗಡೆಗೊಳಿಸಿದ್ದರು.

ಮಾತ್ರವಲ್ಲದೆ ರಾಜ್ಯದ ಆಡಳಿತರೂಢ ಬಿಜೆಪಿಯೊಂದಿಗೆ ಸಂಬಂಧ ಹೊಂದಿರುವ ಬಜರಂಗದಳ ಕಾಲೇಜು ಕಾರ್ಯಕ್ರಮಕ್ಕೆ ನುಗ್ಗಿ ಸಂತ್ರಸ್ತರಿಗೆ ಹಲ್ಲೆ ನಡೆಸಿದೆ. ಘಟನೆಗೆ ಸಂಬಂಧಿಸಿದಂತೆ ಹಲ್ಲೆ ನಡೆಸಿದವರ ವಿರುದ್ಧ ಕ್ರಮ ಜರುಗಿಸುವ ಬದಲು ಕೋವಿಡ್ ಮಾರ್ಗಸೂಚಿಯನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಕಾಲೇಜಿನ ಮೇಲೆ ಪೊಲೀಸರು ದಂಡ ವಿಧಿಸಿದ್ದಾರೆ.

- Advertisement -

ಕೋವಿಡ್ ಮಾರ್ಗಸೂಚಿಯನ್ನು ಉಲ್ಲಂಘನೆ ಮತ್ತು ಕಾಲೇಜಿನಲ್ಲಿ ಅಶಾಂತಿ ಸೃಷ್ಟಿಸಿದ್ದ ಆರೋಪದಲ್ಲಿ ನಾಲ್ವರು ಯುವಕರನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಪ್ರಶಾಂತ್ ಚೌಬೆ ತಿಳಿಸಿದ್ದಾರೆ.

Join Whatsapp