ಬಂಧಿಸಲು ಹೋದ ಪೊಲೀಸ್ ಸಿಬ್ಬಂದಿಗೆ ಚಾಕು ಇರಿದು ಪರಾರಿಯಾಗಲು ಯತ್ನ, ಆರೋಪಿ ಕಾಲಿಗೆ ಶೂಟೌಟ್

Prasthutha|

ಶಿವಮೊಗ್ಗ : ಪ್ರಕರಣವೊಂದಕ್ಕೆ ಆರೋಪಿಯನ್ನು ಬಂಧಿಸಲು ಹೋದ ಇಬ್ಬರು ಪೊಲೀಸ್ ಅಧಿಕಾರಿಗಳಿಗೆ ಚಾಕು ಇರಿದು , ಲಾಂಗು ಬೀಸಿ ಪರಾರಿಯಾಗಲು ಯತ್ನಿಸಿದ ಘಟನೆ ಹಳೇ ಶಿವಮೊಗ್ಗ ನಗರದ ಕ್ಲಾರ್ಕ್ ಪೇಟೆಯಲ್ಲಿ ನಡೆದಿದೆ.

- Advertisement -

ಈತನನ್ನು ಬಂಧಿಸಲು ತೆರಳಿದಾಗ ಪೇದೆಯೊಬ್ಬರ ಎದೆಗೆ ಚಾಕು ಇರಿದು ಎತ್ತಂಗಡಿಯಾಗುವಾಗ ಇನ್ನೋರ್ವ ಸಿಬ್ಬಂದಿ ಹಿಡಿಯಲು ಮುಂದಾದಾಗ ಲಾಂಗು ಬೀಸಿ ಹಲ್ಲೆ ಮಾಡಿದ್ಧಾನೆ. ಆ ಬಳಿಕ ಈತನ ಕಾಲಿಗೆ ಗುಂಡು ಹಾರಿಸಿ ವಶಪಡಿಸಿಕೊಂಡಿದ್ಧಾರೆ. ಗಾಯಾಳು ಆರೋಪಿ ಜಿಲ್ಲೆಯ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ದೊಡ್ಡಪೇಟೆ ಠಾಣೆಯ ಪೊಲೀಸ್ ಪೇದೆಗಳಾದ ರಮೇಶ್ ಮತ್ತು ಗುರುನಾಯ್ಕ್ ಹಲ್ಲೆಗೊಳಗಾದವರು. ಲಷ್ಕರ್ ಮೊಹಲ್ಲಾದ ನಿವಾಸಿಯಾದ ಶಾಹಿದ್ ಖುರೇಶಿ (26) ಚಾಕು ಇರಿದ ಆರೋಪಿಯಾಗಿದ್ಧಾನೆ.

Join Whatsapp