ಜಮ್ಮು – ಕಾಶ್ಮೀರದಲ್ಲಿ ಬಲವಂತದ ಮತಾಂತರ ನಡೆಯುತ್ತಿಲ್ಲ: ಸಿಖ್ ಮುಖಂಡರ ಸ್ಪಷ್ಟನೆ

Prasthutha|

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಬಲವಂತದಿಂದ ಯಾವುದೇ ಮತಾಂತರ ನಡೆಯುತ್ತಿಲ್ಲ ಎಂದು ಸಿಖ್‌ಮುಖಂಡರು ಸ್ಪಷ್ಟಪಡಿಸಿದ್ದಾರೆ.
ಸಿಖ್ ಸಮನ್ವಯ ಸಮಿತಿ (ಎಪಿಎಸ್‌ಸಿಸಿ) ಅಧ್ಯಕ್ಷ ಜಗಮೋಹನ್ ಸಿಂಗ್ ರೈನಾ ಅವರು ಸುದ್ದಿಗೋಷ್ಠಿ ಕರೆದು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಕಾಶ್ಮೀರದ ಸಮುದಾಯಗಳ ನಡುವೆ ವೈಷಮ್ಯ ಉಂಟು ಮಾಡುವ ಉದ್ದೇಶದಿಂದ ದೆಹಲಿಯ ನಾಯಕರು “ಆಕ್ರಮಣಕಾರಿ ಹೇಳಿಕೆಗಳನ್ನು” ನೀಡುತ್ತಿದ್ದಾರೆ ಎಂದು ಸಿಖ್ ನಾಯಕ ಟೀಕಿಸಿದ್ದಾರೆ.

- Advertisement -


ಜಮ್ಮು ಮತ್ತು ಕಾಶ್ಮೀರದ ಸಿಖ್ ಸಮುದಾಯವು ಬಹುಸಂಖ್ಯಾತ ಮುಸ್ಲಿಂ ಸಮುದಾಯದೊಂದಿಗೆ ಸಾಮರಸ್ಯದಿಂದ ಬದುಕುತ್ತಿದೆ. ಇತ್ತೀಚಿನ ಕೆಲವು ವರ್ಷಗಳಲ್ಲಿ ಪಟ್ಟಭದ್ರ ಹಿತಾಸಕ್ತಿಗಳು ಎರಡೂ ಸಮುದಾಯಗಳ ನಡುವೆ ಒಡಕು ಮೂಡಿಸಲು ಅನೇಕ ಪ್ರಯತ್ನಗಳನ್ನು ನಡೆಸುತ್ತಿವೆ. ಆದಾಗ್ಯೂ ಎರಡೂ ಸಮುದಾಯಗಳ ನಡುವೆ ಇರುವ ಬಲವಾದ ಬಾಂಧವ್ಯದಿಂದಾಗಿ ಈ ಪ್ರಯತ್ನಗಳಿಗೆ ಅವಮಾನಕರ ಸೋಲು ಉಂಟಾಗಿದೆ ”ಎಂದು ಸಿಖ್ ನಾಯಕ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.


“ಜನರು ಜಾಗರೂಕರಾಗಿರಬೇಕು ಮತ್ತು ಸುಳ್ಳು ಸುದ್ದಿ ಹರಡದಂತೆ ನೋಡಿಕೊಳ್ಳಬೇಕು. ಬಾಂಧವ್ಯ ಕದಡುವ ಶಕ್ತಿಗಳನ್ನು ಗುರುತಿಸುವುದು ಎರಡೂ ಸಮುದಾಯಗಳ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದರು.
ದೆಹಲಿ ಮೂಲದ ಸಿಖ್ ರಾಜಕಾರಣಿ ಮಂಜಿಂದರ್ ಸಿಂಗ್ ಸಿರ್ಸಾ ಅವರು ದೆಹಲಿ ಸಿಖ್ ಗುರುದ್ವಾರ ಮ್ಯಾನೇಜ್ಮೆಂಟ್ ಕಮಿಟಿ (ಡಿಎಸ್ಜಿಎಂಸಿ) ಮುಖ್ಯಸ್ಥರಾಗಿದ್ದಾರೆ.
ಅವರು ಕಾಶ್ಮೀರಿ ಸಿಖ್ಖರ ಹೆಗಲ ಮೇಲೆ ಪಂಜಾಬ್ ಮತ್ತು ದೆಹಲಿ ರಾಜಕೀಯವನ್ನು ಆಡಲು ಬಯಸುತ್ತಾರೆ. ನಾವು ಇದಕ್ಕೆ ಅವಕಾಶ ನೀಡುವುದಿಲ್ಲ ಎಂದು ಅವರು ಪ್ರತಿಪಾದಿಸಿದರು.

Join Whatsapp