ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಆರೋಪಿ ಸಂಪತ್ ರಾಜ್ ನನ್ನು ರಕ್ಷಿಸುತ್ತಿರುವ ಡಿ.ಕೆ.ಶಿವಕುಮಾರ್: ಶಾಸಕ ಅಖಂಡ ಶ್ರೀನಿವಾಸ್ ಟೀಕೆ

Prasthutha|

ಬೆಂಗಳೂರು:  ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆಯ ಪ್ರಮುಖ ಆರೋಪಿಗಳಾದ ಕಾಂಗ್ರೆಸ್ ಮೇಯರ್ ಆರ್.ಸಂಪತ್ ರಾಜ್ ಮತ್ತು ಕಾರ್ಪೊರೇಟರ್ ಅಬ್ದುಲ್ ರಕೀಬ್ ಝಾಕೀರ್ ರನ್ನು ತಕ್ಷಣವೇ ಪಕ್ಷದಿಂದ ಉಚ್ಛಾಟಿಸಬೇಕೆಂದು ಪುಲಿಕೇಶಿನಗರ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಆಗ್ರಹಿಸಿದ್ದಾರೆ.

- Advertisement -

ಆಗಸ್ಟ್ 11ರಂದು ನಡೆದ ಗಲಭೆಯ ವೇಳೆ ತನ್ನ ಮನೆಗೆ ದಾಳಿ ಮಾಡಲು  ಗುಂಪನ್ನು ಪ್ರಚೋದಿಸಿದ ಈ ಇಬ್ಬರು ನಾಯಕರ ವಿರುದ್ಧ ಕ್ರಮಕೈಗೊಳ್ಳಲು ಕಾಂಗ್ರೆಸ್ ನ ರಾಜ್ಯ ಘಟಕದ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಯಾವುದೇ ಆಸಕ್ತಿ ತೋರಿಸುತ್ತಿಲ್ಲ ಎಂದಿದ್ದಾರೆ.

ಶಿವಕುಮಾರ್ ಪ್ರತಿಪಾದನೆಯನ್ನು ತಳ್ಳಿಹಾಕಿರುವ ಮೂರ್ತಿ, ಡಿ.ಕೆ.ಶಿವಕುಮಾರ್ ಯಾಕಾಗಿ ಆರೋಪಿಗಳನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.

- Advertisement -

ತನ್ನ ಟೀಕೆಯನ್ನು ಮುಂದುವರಿಸಿದ ಮೂರ್ತಿ, ಸಂಪತ್ ರಾಜ್ ತಾನು ಅಪರಾಧಿಯಲ್ಲದಿದ್ದರೆ ಆಸ್ಪತ್ರೆಯಿಂದ ಪರಾರಿಯಾಗುತ್ತಿರಲಿಲ್ಲ. ಆತ ಅಪರಾಧಿಯಾಗಿದ್ದಾನೆ. ಅದು ನನಗೆ ಖಚಿತ ಎಂದು ಹೇಳಿದ್ದಾರೆ.

ಪ್ರಕರಣದ ಕುರಿತು ಶಿವಕುಮಾರ್ ರ ಮೌನವನ್ನು ಪ್ರಶ್ನಿಸಿರುವ ಅವರು ಪ್ರಕರಣದಲ್ಲಿ ತನ್ನನ್ನು ಬೆಂಬಲಿಸುವಂತೆ ಕೋರಿದ್ದಾರೆ.

Join Whatsapp