ಶಸ್ತ್ರಸಜ್ಜಿತ ದರೋಡೆಕೋರರ ಬಂದೂಕು ಲೆಕ್ಕಿಸದೆ ಕಾದಾಡಿದ ಯುವಕರು | ವೀಡಿಯೋ ವೈರಲ್

Prasthutha|

ಅಂಬರನಾಥ್ : ಗನ್, ಚೂರಿಗಳು ಅದರಲ್ಲೂ ಅವು ಕ್ರಿಮಿನಲ್ ಗಳ ಕೈಯಲ್ಲಿದ್ದಾಗ ಯಾರು ತಾನೇ ಎದುರು ನಿಲ್ಲಲು ತಯಾರಿರುತ್ತಾರೆ? ಆದರೆ, ಇದ್ಯಾವುದನ್ನೂ ಲೆಕ್ಕಿಸದೆ, ಶಸ್ತ್ರಸಜ್ಜಿತರಾಗಿ ಬಂದ ಡಕಾಯಿತರನ್ನು ಇಲ್ಲೊಂದು ಯುವಕರ ತಂಡ ಬರಿಗೈಯಿಂದ ಹೊಡೆದೋಡಿಸಿ ದಿಟ್ಟತನ ಮೆರೆದ ಘಟನೆ ನಡೆದಿದೆ.

- Advertisement -

ಮಹಾರಾಷ್ಟ್ರದ ಅಂಬರ್ ನಾಥ್ ನಲ್ಲಿ ಜ್ಯುವೆಲ್ಲರಿ ಅಂಗಡಿಯೊಂದಕ್ಕೆ ಡಕಾಯಿತರ ಗುಂಪು ಹಾಡಹಾಗಲೇ ನುಗ್ಗಿದೆ. ಮಧ್ಯಾಹ್ನ 1:30ರ ಸುಮಾರಿಗೆ ಡಕಾಯಿತರು ನುಗ್ಗಿದ್ದಾರೆ. ಅವರ ಕೈಯಲ್ಲಿ ಚಾಕು, ಚೂರಿ ಮಾತ್ರವಲ್ಲದೆ ಗನ್ ಗಳನ್ನೂ ಹೊಂದಿದ್ದರು.

ಅಂಗಡಿಯೊಳಗೆ ನುಗ್ಗಿದ ಅವರು ಅಲ್ಲಿ ಕೆಲಸಗಾರನೊಬ್ಬನಿಗೆ ಇರಿದಿದ್ದಾರೆ. ಇದೇ ವೇಳೆ ಸಮೀಪವೇ ಇದ್ದ ಯುವಕರು ಮುಂದೆ ಆಗಬಹುದಾದ ಅನಾಹುತಗಳನ್ನು ತಪ್ಪಿಸಲು ಗನ್, ಚೂರಿಗಳನ್ನೂ ಲೆಕ್ಕಿಸದೆ ಮುನ್ನುಗ್ಗಿದ್ದಾರೆ. ಡಕಾಯಿತರ ಮೇಲೆ ಹಲ್ಲೆ ಮಾಡಿ, ಅವರಿಂದ ಶಸ್ತ್ರಾಸ್ತ್ರಗಳನ್ನು ಕಿತ್ತುಕೊಂಡಿದ್ದಾರೆ.

- Advertisement -

ಯುವಕರು ಹೀಗೆ ಮಾಡುತ್ತಿದ್ದಂತೆ ದೈರ್ಯ ಬಂದ ಸ್ಥಳೀಯರೂ ಅವರೊಂದಿಗೆ ಸೇರಿಕೊಂಡರು. ಈ ಕುರಿತ ವೀಡಿಯೊವೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಘಟನೆಯಲ್ಲಿ ಕೆಲವರಿಗೆ ಗಾಯಗಳಾಗಿವೆ. ಜನರನ್ನು ಕಂಡು ದರೋಡೆಕೋರರು ಪರಾರಿಯಾಗಿದ್ದಾರೆ.  

Join Whatsapp