ಟಿಆರ್ ಪಿ ಹಗರಣ : ಅರ್ನಾಬ್ ಗೋಸ್ವಾಮಿ, ಬಾರ್ಕ್ ಮಾಜಿ ಸಿಇಒ ನಡುವಿನ ವಾಟ್ಸಪ್ ಚಾಟ್ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್

Prasthutha|

ಮುಂಬೈ : ಟಿಆರ್ ಪಿ ಹಗರಣಕ್ಕೆ ಸಂಬಂಧಿಸಿದ ಬಹುದೊಡ್ಡ ಬೆಳವಣಿಗೆಯೊಂದರಲ್ಲಿ, ರಿಪಬ್ಲಿಕ್ ಟಿವಿ ಪ್ರಧಾನ ಸಂಪಾದಕ ಅರ್ನಾಬ್ ಗೋಸ್ವಾಮಿ ಮತ್ತು ಬ್ರಾಡ್ ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್ (ಬಾರ್ಕ್)ನ ಮಾಜಿ ಸಿಇಒ ಪಾರ್ಥೋ ದಾಸ್ ಗುಪ್ತಾ ಅವರ ನಡೆದಿದೆ ಎನ್ನಲಾದ ವಾಟ್ಸಾಪ್ ಚಾಟ್ ದಾಖಲೆಯೊಂದು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿವೆ.

- Advertisement -

ಸುಮಾರು 500 ಪುಟಗಳಿವೆ ಎನ್ನಲಾದ ದಾಖಲೆಯ ಆಯ್ದ ಕೆಲವು ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ.

ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿರುವ ಸಂದೇಶಗಳ ಪ್ರಕಾರ, ಗೋಸ್ವಾಮಿ ಮತ್ತು ಪ್ರಧಾನಿ ಸಚಿವಾಲಯ ಮತ್ತು ಆಡಳಿತಾರೂಢ ಸದಸ್ಯರ ನಡುವಿನ ನಂಟಿನ ಬಗ್ಗೆ ಮಾಹಿತಿಯಿದೆ. ಟಿಆರ್ ಪಿ ತಿರುಚುವ ಬಗ್ಗೆ ಅವರ ಒಲವು ಮತ್ತು ಅದಕ್ಕಾಗಿ ಬಿಜೆಪಿ ಸರಕಾರದ ಸಹಾಯ ಕೋರುವ ಮತ್ತು ಇತರ ವಿಚಾರಗಳ ಕುರಿತು ಈ ಸಂದೇಶಗಳಲ್ಲಿವೆ.

- Advertisement -

ಈ ಕೆಳಗಿನ ಕೆಲವು ಪ್ರಮುಖರು ಈ ವಾಟ್ಸಪ್ ಚಾಟ್ ಪ್ರತಿಗಳನ್ನು ಟ್ವೀಟ್ ಮಾಡಿದ್ದಾರೆ.

Join Whatsapp