ನಿಮ್ಮ ನೋವು ನಮ್ಮದೂ ಕೂಡಾ : ಭಾರತೀಯ ಮುಸ್ಲಿಮರಿಗೆ ಸಂಗೀತಗಾರ ವಿಶಾಲ್ ದದ್ಲಾನಿ ಸಾಥ್

Prasthutha|

ನವದೆಹಲಿ: ಬಿಜೆಪಿ ನಾಯಕಿ ನೂಪುರ್ ಶರ್ಮಾ, ಪ್ರವಾದಿ ಮುಹಮ್ಮದ್ ಅವರನ್ನು ಅವಹೇಳನ ಮಾಡಿರುವ ಕುರಿತು ವಿವಾದಗಳು‌ ನಡೆಯುತ್ತಿದೆ. ಈ ಮಧ್ಯೆ ಭಾರತದ ಮುಸ್ಲಿಮರ ಪರವಾಗಿ ಖ್ಯಾತ ಸಂಗೀತಗಾರ ವಿಶಾಲ್ ದದ್ಲಾನಿ ಮಾತನಾಡಿ ಮುಸ್ಲಿಮರಿಗೆ ಬೆಂಬಲ ಸೂಚಿಸಿದ್ದಾರೆ.

- Advertisement -

ಸಂಗೀತಗಾರ ವಿಶಾಲ್ ದಾದ್ಲಾನಿ ಅವರು ಟ್ವೀಟರ್‌‌ನಲ್ಲಿ, “ಬಹುಸಂಖ್ಯಾತ ಭಾರತೀಯ ಹಿಂದೂಗಳ ಪರವಾಗಿ ನಾನು ಭಾರತೀಯ ಮುಸ್ಲಿಮರಿಗೆ ಇದನ್ನು ಹೇಳಲು ಬಯಸುತ್ತೇನೆ. ನಿಮ್ಮನ್ನು ನೋಡಿಕೊಳ್ಳಲಾಗಿದೆ, ಕೇಳಿಸಿಕೊಳ್ಳಲಾಗಿದೆ, ಪ್ರೀತಿಸಲಾಗಿದೆ ಮತ್ತು ಸಲಹಲಾಗಿದೆ. ನಿಮ್ಮ ನೋವು ನಮ್ಮ ನೋವೇ ಆಗಿದೆ. ನಿಮ್ಮ ದೇಶಭಕ್ತಿ ಪ್ರಶ್ನಾರ್ಹವಲ್ಲ. ನಿಮ್ಮ ಗುರುತು ಭಾರತಕ್ಕೆ ಅಥವಾ ಬೇರೆ ಯಾವುದೇ ಧರ್ಮಕ್ಕೆ ಬೆದರಿಕೆಯಲ್ಲ. ನಾವು ಒಂದು ರಾಷ್ಟ್ರವಾಗಿದ್ದು, ಒಂದು ಕುಟುಂಬವಾಗಿದ್ದೇವೆ” ಎಂದು ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಸಂಸದ ಶಶಿ ತರೂರ್‌‌, ವಿಶಾಲ್ ದದ್ಲಾನಿ ಅವರ ಭಾವನೆಗಳನ್ನು ನಾನು ಆತ್ಮೀಯವಾಗಿ ಪ್ರತಿಧ್ವನಿಸುತ್ತೇನೆ ಎಂದು ಹೇಳಿದ್ದು, “ಮೌನವಾಗಿರುವ ದೊಡ್ಡ ಬಹುಸಂಖ್ಯಾತರ ಪರವಾಗಿ ಮಾಡಿದ್ದಕ್ಕೆ ಶಭಾಷ್‌” ಎಂದು ಹೇಳಿದ್ದಾರೆ.

Join Whatsapp