ಗೋವಿನ ಹೆಸರಲ್ಲಿ ಮುಸ್ಲಿಮರ ಹತ್ಯೆ ಕುರಿತು ಹೇಳಿಕೆ: ನಟಿ ಸಾಯಿ ಪಲ್ಲವಿ ವಿರುದ್ಧ ಬಜರಂಗದಳ ದೂರು !

Prasthutha|

ಹೈದರಾಬಾದ್: ನಟಿ ಸಾಯಿ ಪಲ್ಲವಿ ಹೇಳಿಕೆಗೆ ದೇಶಾದ್ಯಂತ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದ್ದಂತೆ ನಟಿಯ ವಿರುದ್ಧ ಬಜರಂಗದಳ ದೂರು ದಾಖಲಿಸಿದೆ. ಕಾಶ್ಮೀರಿ ಪಂಡಿತರ ಹತ್ಯೆ ಹಾಗೂ ಗೋವು ಸಾಗಿಸುವ ಮುಸ್ಲಿಮರ ಮೇಲಿನ ದಾಳಿಯೂ ಒಂದೇ ಎಂದು ಸಂದರ್ಶನವೊಂದರಲ್ಲಿ ಸಾಯಿ ಪಲ್ಲವಿ ಹೇಳಿದ್ದರು, ಇದೀಗ ನಟಿಯ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿರುವ ಬಜರಂಗದಳ ಮುಖಂಡರು ಹೈದರಾಬಾದ್‌ನ ಸುಲ್ತಾನ್ ಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

- Advertisement -

ಮಾಧ್ಯಮ ಸಂದರ್ಶನವೊದರಲ್ಲಿ ಹೇಳಿಕೆ ನೀಡಿದ್ದ ನಟಿ ಪಲ್ಲವಿ, ದಿ ಕಾಶ್ಮೀರ್ ಫೈಲ್ಸ್ ಎಂಬ ಚಲನಚಿತ್ರವು ಕಾಶ್ಮೀರಿ ಪಂಡಿತರನ್ನು ಹೇಗೆ ಕೊಲ್ಲಲಾಯಿತು ಎಂಬುದನ್ನು ತೋರಿಸುತ್ತದೆ. ಇತ್ತೀಚೆಗೆ, ಒಬ್ಬ ವ್ಯಕ್ತಿಯು ಮುಸ್ಲಿಂ ಎಂದು ಶಂಕಿಸಲಾದ ಕಾರಣ ಹಸುವನ್ನು ಸಾಗಿಸುತ್ತಿದ್ದಕ್ಕಾಗಿ ಅವನನ್ನು ಕೊಂದ ಘಟನೆಯೊಂದು ನಡೆಯಿತು. ವ್ಯಕ್ತಿಯನ್ನು ಕೊಂದ ನಂತರ, ದಾಳಿಕೋರರು ‘ಜೈ ಶ್ರೀರಾಮ್’ ಘೋಷಣೆಗಳನ್ನು ಕೂಗಿದರು. ಕಾಶ್ಮೀರದಲ್ಲಿ ಏನಾಯಿತು ಮತ್ತು ಇತ್ತೀಚೆಗೆ ಏನಾಯಿತು ಎಂಬುದರ ನಡುವಿನ ವ್ಯತ್ಯಾಸ ಎಲ್ಲಿದೆ ಎಂದು ಪ್ರಶ್ನಿಸಿದ್ದರು.

ದೂರನ್ನು ಸ್ವೀಕರಿಸಿರುವ ಪೊಲೀಸರು ಕಾನೂನು ಅಭಿಪ್ರಾಯ ಪಡೆದು ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

Join Whatsapp