ಮಲ್ಪೆ | ಈಜಲು ತೆರಳಿದ್ದ ಓರ್ವ ಪ್ರವಾಸಿಗ ನೀರುಪಾಲು; ನಾಲ್ವರ ರಕ್ಷಣೆ

Prasthutha|

ಉಡುಪಿ: ಮಲ್ಪೆ ಬೀಚ್ ನಲ್ಲಿ ಈಜಲು ತೆರಳಿದ್ದ ಪ್ರವಾಸಿಗಳಲ್ಲಿ ಓರ್ವ ನೀರುಪಾಲಾಗಿದ್ದು, ನಾಲ್ವರನ್ನು ರಕ್ಷಿಸಲಾಗಿದೆ.
ನೀರುಪಾಲಾದ ವ್ಯಕ್ತಿಯನ್ನು ತುಮಕೂರಿನ ವಿನೋದ್ ನಗರದ ನಿವಾಸಿ ಅಖ್ತರ್(23) ಎಂದು ಗುರುತಿಸಲಾಗಿದೆ.

- Advertisement -

ತುಮಕೂರಿನಿಂದ ಎಂಟು ಮಂದಿಯಿದ್ದ ಪ್ರವಾಸಿಗರ ತಂಡ ಮಲ್ಪೆ ಬೀಚ್ ಗೆ ವಿಹಾರಕ್ಕೆಂದು ಬಂದಿದ್ದರು, ಈ ವೇಳೆ ಈಜುತ್ತಿದ್ದ ಮೂವರು ಸಮುದ್ರ ಅಲೆಗೆ ಸಿಲುಕಿದ್ದು, ತಕ್ಷಣವೇ ಜೀವರಕ್ಷಕ ತಂಡ ಜೆಟ್ ಸ್ಕೀಗಳನ್ನು ಬಳಸಿ ಇಬ್ಬರನ್ನು ರಕ್ಷಿಸಿದೆ, ಈ ವೇಳೆ ಓರ್ವ ನೀರುಪಾಲಾಗಿದ್ದು ಮೃತ ಯುವಕನ ಮೃತದೇಹ ಪತ್ತೆಯಾಗಿದೆ.

ಇದೇ ವೇಳೆ ಹಾಸನದಿಂದ ಬಂದಿದ್ದ ಇಬ್ಬರು ಪ್ರವಾಸಿಗರು ಈಜಲು ತೆರಳಿದ್ದು ನೀರುಪಾಲಾಗುತ್ತಿದ್ದ ವೇಳೆ ಜೀವರಕ್ಷಕರು ರಕ್ಷಿಸಿದ್ದಾರೆ. ಸಮುದ್ರವು ಪ್ರಕ್ಷುಬ್ಧವಾಗಿತ್ತಲ್ಲದೇ ಪ್ರವಾಸಿಗರಿಗೆ ನೀರಿಗೆ ಇಳಿಯದಂತೆ ಎಚ್ಚರಿಸಲಾಗಿತ್ತು ಎನ್ನಲಾಗಿದೆ, ಆದರೂ ಜೀವರಕ್ಷಕರ ಕಣ್ತಪ್ಪಿಸಿ ನೀರಿಗೆ ಇಳಿದಿದ್ದಾರೆ ಎಂದು ತಿಳಿದು ಬಂದಿದೆ.

Join Whatsapp