ಧರ್ಮ ಸಂಸದ್ ದ್ವೇಷ ಭಾಷಣ ಪ್ರಕರಣ: ಯತಿ ನರಸಿಂಗಾನಂದ್ ಬಂಧನ

Prasthutha|

ನವದೆಹಲಿ: ಹರಿದ್ವಾರ ಧರ್ಮ ಸಂಸದ್ ದ್ವೇಷ ಭಾಷಣ ಪ್ರಕರಣಕ್ಕೆ ಸಂಬಂಧಪಟ್ಟಂತೆ ಯತಿ ನರಸಿಂಘಾನಂದ್ ನ್ನು ಹರಿದ್ವಾರದಿಂದ ಬಂಧಿಸಲಾಗಿದೆ ತಿಳಿದು ಬಂದಿದೆ.

- Advertisement -

ಯತಿ ನರಸಿಂಹಾನಂದ್ ಅವರನ್ನು ಪೊಲೀಸ್ ಠಾಣೆಗೆ ಕರೆತರಲಾಗಿದೆ ಎಂದು ಹರಿದ್ವಾರ ಪೊಲೀಸ್ ಅಧೀಕ್ಷಕ (ನಗರ) ಸ್ವತಂತ್ರ ಕುಮಾರ್ ಅವರು ತಿಳಿಸಿದ್ದಾರೆ. ಆದಾಗ್ಯೂ, ತಾಂತ್ರಿಕವಾಗಿ ಇದು ಬಂಧನವಲ್ಲ ಎಂದು ಅಧಿಕಾರಿ ಹೇಳಿದರು. ಪ್ರಕರಣದ ಮತ್ತೊಬ್ಬ ಆರೋಪಿ ಜಿತೇಂದ್ರ ನಾರಾಯಣ್ ತ್ಯಾಗಿ (ವಸೀಮ್ ರಿಜ್ವಿ) ಯನ್ನು ಇತ್ತೀಚೆಗೆ ಬಂಧಿಸಿದ್ದನ್ನು ವಿರೋಧಿಸಿ ಅವರು ಧರಣಿ ಕುಳಿತಿದ್ದ ಸ್ಥಳದಿಂದ ಅವರನ್ನು ಕರೆದೊಯ್ಯಲಾಗಿತ್ತು .

ಮುಂದಿನ ಕ್ರಮವು ತನಿಖೆ ಹೇಗೆ ಮುಂದುವರಿಯುತ್ತದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ ಎಂದು ಅಧಿಕಾರಿ ಹೇಳಿದರು.ಈ ಘಟನೆಗೆ ಸಂಬಂಧಿಸಿದಂತೆ ದಾಖಲಾದ ಎಫ್ ಐಆರ್ ಗಳಲ್ಲಿ ಹೆಸರಿಸಲಾದ ಆರೋಪಿಗಳಲ್ಲಿ ತ್ಯಾಗಿ ಮತ್ತು ನರಸಿಂಹಾನಂದ್ ಇಬ್ಬರೂ ಸೇರಿದ್ದಾರೆ. ಘಟನೆ ನಡೆದ ಹಲವು ದಿನಗಳ ಹೊರತಾಗಿಯೂ ತಪ್ಪಿತಸ್ಥರ ವಿರುದ್ಧ ಕಾರ್ಯನಿರ್ವಹಿಸದ ಉತ್ತರಾಖಂಡ ಸರ್ಕಾರವನ್ನು ಸುಪ್ರೀಂ ಕೋರ್ಟ್ ಚೀಮಾರಿ ಹಾಕಿದ ನಂತರ ಈ ಬಂಧನಗಳು ನಡೆದಿದೆ.

Join Whatsapp