ಹಾಸನದಲ್ಲಿ ಪ್ರಜ್ವಲ್‌ನನ್ನು ಕಣದಿಂದ ಕೆಳಗಿಳಿಸಬೇಕು: ಡಿಕೆ ಸುರೇಶ್

Prasthutha|

ಬೆಂಗಳೂರು:ಹಾಸನ ಜಿಲ್ಲೆಯಲ್ಲಿ ನಡೆದಿರುವ ಘಟನೆ ನಾಚಿಕೆಗೆಡಿನ ಘಟನೆಯಾಗಿದ್ದು, ಈ ಬಗ್ಗೆ ಕುಮಾರ ಸ್ವಾಮಿ ಮಾತನಾಡಲಿ. ಹೆಣ್ಣುಮಕ್ಕಳು, ತಾಯಂದಿರು, ಸಹೋದರಿಯರು, ಇಡೀ ಸಮಾಜಕ್ಕೆ ಕಳಂಕ ತರುವ ಕೆಲಸ ಇದಾಗಿದೆ. ನಿಜವಾಗಲೂ ಕರ್ನಾಟಕ, ಕನ್ನಡಿರ ಬಗ್ಗೆ ಗೌರವ ಇರುವುದಾದರೆ ಹಾಸನದಲ್ಲಿ ಅವರನ್ನು ಕಣದಿಂದ ಕೆಳಗಿಸಬೇಕೆಂದು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಅಭ್ಯರ್ಥಿ ಡಿ.ಕೆ.ಸುರೇಶ್‌ ಹೇಳಿದ್ದಾರೆ.

- Advertisement -

ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಹಾಸನದ ಘಟನೆಯ ವಿಚಾರಗಳನ್ನು ಈಗಾಗಲೇ ನಾವು ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ವೀಕ್ಷಣೆ ಮಾಡಿದ್ದೇವೆ. ಇದು ಅವರ ಕುಟುಂಬಕ್ಕೆ ನಾಚಿಕೆ ಆಗುವ ವಿಚಾರವಾಗಿದೆ. ಸುಮ್ಮನೆ ದಾರಿ ತಪ್ಪಿಸುವುದನ್ನು ಬಿಟ್ಟು ಹಾಗೂ ಕರ್ನಾಟಕ, ಕನ್ನಡದ ಹೆಣ್ಣುಮಕ್ಕಳ ಬಗ್ಗೆ ಗೌರವ ಇರೋದೇ ಆದರೆ ಮೊದಲು ಕಣದಿಂದ ಹಿಂದೆ ಸರಿಯಲು ಹೇಳಬೇಕು ಅವರಿಗೆ. ಬೇರೆಯವರ ಮೇಲೆ ಆರೋಪ ಮಾಡೋದು ಅಷ್ಟೇ ಅಲ್ಲ ಮುಖ್ಯ. ನಮ್ಮ ನುಡಿ, ನಡೆ ಕೂಡ ಮುಖ್ಯ ಆಗುತ್ತದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಕೂಪನ್‌ ಹಂಚಿಕೆ ಮಾಡಿದ್ದಾರೆ ಎಂಬ ಡಾ.ಮಂಜುನಾಥ್‌ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಅವರು ಕೂಪನ್‌ ಹಂಚಿಕೆ ಮಾಡಿರುವುದನ್ನು ನಾನು ಹೇಳಲೇ ಎಂದು ಮಂಜುನಾಥ್‌ ಅವರ ಭಾವಚಿತ್ರವುಳ್ಳ ಕಾರ್ಡ್‌ ತೋರಿಸಿ ತಿರುಗೇಟು ನೀಡಿದರು.

Join Whatsapp