ಕೋಮುವಾದಿ ಬಿಜೆಪಿಯವರೇ ಹಿಂದೂಗಳ ಹತ್ಯೆ ಮಾಡಿಸುತ್ತಾರೆ: ಯತೀಂದ್ರ ಸಿದ್ಧರಾಮಯ್ಯ

Prasthutha|

ಮೈಸೂರು: ಬಿಜೆಪಿ ಯವರಿಗೆ ಧರ್ಮ ಬಿಟ್ಟು ರಾಜಕೀಯ ಮಾಡಲು ಬರುವುದಿಲ್ಲ. ಅವರದ್ದು ಕೋಮುವಾದ ರಾಜಕೀಯ ಎಂದು ಶಾಸಕ ಯತೀಂದ್ರ ಸಿದ್ಧರಾಮಯ್ಯ ಆರೋಪಿಸಿದ್ದಾರೆ.

- Advertisement -


ಸಿದ್ಧರಾಮಯ್ಯ ಅಧಿಕಾರಕ್ಕೆ ಬಂದರೇ ಹಿಂದೂಗಳ ಹತ್ಯೆಯಾಗುತ್ತದೆ ಎಂಬ ಸಿ.ಟಿ ರವಿ ಹೇಳಿಕೆಗೆ ತಿರುಗೇಟು ನೀಡಿದ ಅವರು, ನಮ್ಮ ತಂದೆ ಕಾಲದಲ್ಲಿ ಹಿಂದೂ ಗಳ ಹತ್ಯೆಯಾಗಿಲ್ಲ. ನಾವು ನಿಜವಾದ ಹಿಂದೂಗಳು. ಬಿಜೆಪಿಯವರು ಪೊಳ್ಳು ಹಿಂದೂಗಳು. ಧರ್ಮ ಧರ್ಮಗಳ ನಡುವೆ ಗಲಾಟೆ ಆಗಲಿ ಅನ್ನೋ ಕಾರಣಕ್ಕೆ ಬಿಜೆಪಿಯವರೇ ಹಿಂದೂಗಳ ಹತ್ಯೆ ಮಾಡಿಸುತ್ತಾರೆ. ಧರ್ಮ ಎತ್ತಿಕಟ್ಟಿ ರಾಜಕೀಯ ಲಾಭ ಮಾಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.


ಹಿಂದೂಗಳಿಗೆ ಬಿಜೆಪಿ ರಕ್ಷಣೆ ಕೊಡಲ್ಲ. ಶಾಂತಿ ನೆಮ್ಮದಿ ಇರಬೇಕಾದರೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹಿಂದೂಗಳಿಗೆ ತೊಂದರೆಯಾಗಲ್ಲ ಎಂದು ಹೇಳಿದರು.

Join Whatsapp