ನಾನು ರಾಷ್ಟ್ರಪತಿಯಾಗಿ ಆಯ್ಕೆಯಾದರೆ CAA ಜಾರಿ ಮಾಡಲ್ಲ: ಯಶವಂತ್ ಸಿನ್ಹಾ

Prasthutha|

- Advertisement -

ಗುವಾಹಟಿ: ನಾನು ರಾಷ್ಟ್ರಪತಿಯಾಗಿ ಆಯ್ಕೆಯಾದರೆ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಜಾರಿಯಾಗದಂತೆ ನೋಡಿಕೊಳ್ಳುವುದಾಗಿ ಪ್ರತಿಪಕ್ಷದ ರಾಷ್ಟ್ರಪತಿ ಅಭ್ಯರ್ಥಿ ಯಶವಂತ್ ಸಿನ್ಹಾ ಬುಧವಾರ ಹೇಳಿದ್ದಾರೆ.

ಅಸ್ಸಾಂನ ವಿರೋಧ ಪಕ್ಷದ ಸಂಸದರೊಂದಿಗೆ ಸಂವಾದ ನಡೆಸಿದ ಸಿನ್ಹಾ, ಬಿಜೆಪಿ ನೇತೃತ್ವದ ಸರ್ಕಾರವು ತರಾತುರಿಯಲ್ಲಿ “ಮೂರ್ಖತನದಿಂದ ಕರಡು” ಮಾಡಿದ್ದರಿಂದ ಇಲ್ಲಿಯವರೆಗೆ ಅದನ್ನು ಜಾರಿಗೆ ತರಲು ಸಾಧ್ಯವಾಗಿಲ್ಲ ಎಂದು ಹೇಳಿದರು.

- Advertisement -

ಪೌರತ್ವವು ಅಸ್ಸಾಂಗೆ ಪ್ರಮುಖ ವಿಷಯವಾಗಿದೆ, ಸರ್ಕಾರ ದೇಶಾದ್ಯಂತ ಕಾಯಿದೆಯನ್ನು ತರಲು ಬಯಸಿದೆ. ಆದರೆ ಇನ್ನೂ ಅದನ್ನು ಜಾರಿ ಮಾಡಲು ಸಾಧ್ಯವಾಗಲಿಲ್ಲ ಎಂದು ಹೇಳಿದರು. ಸಂವಿಧಾನ ಅಪಾಯದಲ್ಲಿದೆ ಆದರೆ ಅದು ಯಾವುದೇ ಹೊರಗಿನ ಶಕ್ತಿಯಿಂದಲ್ಲ, ಅಧಿಕಾರದಲ್ಲಿರುವವರಿಂದ. ಅದನ್ನು ರಕ್ಷಿಸಬೇಕು. ನಾನು ರಾಷ್ಟ್ರಪತಿ ಭವನದಲ್ಲಿದ್ದರೆ ಸಿಎಎ ಜಾರಿಯಾಗದಂತೆ ನೋಡಿಕೊಳ್ಳುತ್ತೇನೆ ಎಂದರು.

Join Whatsapp