ನರಬಲಿಗಾಗಿ ಎರಡು ತಿಂಗಳ ಮಗುವಿನ ಅಪಹರಣ| ಮಹಿಳೆ ಬಂಧನ

Prasthutha|

ಹೊಸದಿಲ್ಲಿ: ನರಬಲಿಗಾಗಿ ಎರಡು ತಿಂಗಳ ಮಗುವನ್ನು ಅಪಹರಿಸಿದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಆಗ್ನೇಯ ದೆಹಲಿಯ ಗಾರ್ಹಿಯಲ್ಲಿ ಈ ಘಟನೆ ನಡೆದಿದ್ದು, ಕೋಟ್ಲಾ ಮುಬಾರಕ್‌ಪುರ ಮೂಲದ 25 ವರ್ಷದ ಶ್ವೇತಾ ಬಂಧಿತ ಮಹಿಳೆಯಾಗಿದ್ದಾಳೆ.

- Advertisement -

ತನ್ನ ಮೃತ ತಂದೆಯನ್ನು ಬದುಕಿಸಲಿಕ್ಕಾಗಿ ಬಲಿ ಕೊಡಲು ಮಗುವನ್ನು ಅಪಹರಿಸಿರುವುದಾಗಿ ಆರೋಪಿ ಮಹಿಳೆ ಹೇಳಿಕೊಂಡಿದ್ದಾಳೆ. ಮಹಿಳೆಯ ಕೈಯಿಂದ ಮಗುವನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಓರ್ವ ಅಪರಿಚಿತ ಮಹಿಳೆ ಎರಡು ತಿಂಗಳ ಗಂಡು ಮಗುವನ್ನು ಗಾರ್ಹಿ ಪ್ರದೇಶದಿಂದ ಅಪಹರಿಸಿಕೊಂಡು ಹೋಗಿದ್ದಾಳೆ ಎಂದು ಪೊಲೀಸರಿಗೆ ದೂರು ನೀಡಲಾಗಿತ್ತು. ಈ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡ ಪೊಲೀಸರು ಮಹಿಳೆಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.  

Join Whatsapp