ರಸ್ತೆ ಗುಂಡಿಮಯ: ಶಾಸಕ ರಘುಪತಿ ಭಟ್ ನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡ ಯುವತಿ

Prasthutha|

ಮಂಗಳೂರಿಗೆ ಪ್ರಧಾನಿ ಬರ್ತಾರೆ ಅನ್ನೋ ಕಾರಣಕ್ಕೆ ರಸ್ತೆ ರಿಪೇರಿ ಆಗ್ತಾ ಇದೆ. ಆದರೆ ಉಡುಪಿಯಲ್ಲಿ ಯಾವಾಗ?

- Advertisement -

ಉಡುಪಿ: ಉಡುಪಿ ಜಿಲ್ಲೆಯ ರಸ್ತೆಗಳು ಹದಗೆಟ್ಟು ಹೋಗಿದ್ದು, ಯುವತಿಯೊಬ್ಬರು ಶಾಸಕ ರಘುಪತಿ ಭಟ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.

ನಾವು ಇಷ್ಟು ವರ್ಷಗಳಿಂದ ಟೋಲ್, ರೋಡ್, ವಾಹನ ತೆರಿಗೆ ಕಟ್ಟುತ್ತಿದ್ದೇವೆ. ಇದು ಯಾರ ಹೊಟ್ಟೆಗೆ ಮಣ್ಣು ಹಾಕಲು ಕಟ್ಟುತ್ತಿದ್ದೇವೆ ಹೇಳಿ. ಕೇಳಿದರೆ ಡ್ರೈನೇಜ್ ಕಟ್ಟಿದ್ದೇವೆ, ಅದು ಕಟ್ಟಿದ್ದೇವೆ, ಇದು ಕಟ್ಟಿದ್ದೇವೆ ಎಂದು ಹೇಳುತ್ತಾರೆ. ಯಾವುದಾದರೂ ಕೆಲಸ ಸರಿಯಾಗಿ ಮಾಡುತ್ತೀರಾ? ರಘುಪತಿ ಭಟ್ಟರೇ ನಿಮಗೆ ನನ್ನದೊಂದು ಪ್ರಶ್ನೆ.. ನೀವು ನಿಮ್ಮ ಮನೆಗೆ ಇದೇ ರಸ್ತೆಯಲ್ಲಿ ಹೋಗುತ್ತೀರಿ, ನಿಮಗೆ ಸ್ವಲ್ಪವೂ ಬೇಸರವಾಗುವುದಿಲ್ಲವೇ? ಇವತ್ತು ನಾನು ಮನೆಗೆ ಹೋಗುವಾಗ ಸ್ಕೂಟರ್ ಸವಾರರೊಬ್ಬರು ಹೊಂಡದಲ್ಲಿ ಬಿದ್ದಿದ್ದರು. ಇದು ನನ್ನ ಕಣ್ಣೆದುರೇ ಆದ ಅಪಘಾತ. ಅವರಿಗೆ ಏನಾದರೂ ಆಗಿರುತ್ತಿದ್ದರೆ? ಅವರ ಜೊತೆ ಒಂದು ಮಗುವಿದ್ದರೆ ಏನಾಗುತ್ತಿತ್ತು?

- Advertisement -

ನೀವು ಸರ್ಕಾರಿ ವಾಹನದಲ್ಲಿ ಓಡಾಡುತ್ತಿರಿ. ನೀವು ಓಡಾಡುವಾಗ ಹೊಂಡ ಇದೆಯೋ ? ಹೊಂಡಕ್ಕೆ ಯಾರಾದರೂ ಬಿದ್ದಿದ್ದಾರೋ ಗೊತ್ತಾಗೋದಿಲ್ಲ. ನಿಮಗೆ ಸ್ವಲ್ಪವಾದರೂ ಕಾಮನ್ ಸೆನ್ಸ್, ಮನುಷ್ಯತ್ವ ಇದೆಯಾ? ಪ್ರಧಾನಿ ಮೋದಿ ಬರುತ್ತಾರೆ ಅನ್ನೋ ಕಾರಣಕ್ಕೆ ಮಂಗಳೂರು ರಸ್ತೆಗಳು ರಿಪೇರಿ ಆಗುತ್ತಿವೆ. ನಮ್ಮ ಊರಿನ ರಸ್ತೆಗಳು ಸರಿಯಾಗಲು ಯಾರು ಬರಬೇಕು ಎಂದು ಯುವತಿ ಪ್ರಶ್ನಿಸಿದ್ದಾಳೆ.

Join Whatsapp