ಮುನಾವರ್ ಫಾರೂಕಿ ಪ್ರದರ್ಶನಕ್ಕೆ ಹೈದರಾಬಾದ್ ನಲ್ಲಿ ಅವಕಾಶ ನೀಡುವುದಿಲ್ಲ: ಬಿಜೆಪಿ ಸಂಸದ ಅರವಿಂದ್

Prasthutha|

ಹೈದರಾಬಾದ್: ಹಾಸ್ಯ ಕಲಾವಿದ ಮುನಾವರ್ ಫಾರೂಕಿ ಅವರ ಹೈದರಾಬಾದ್ ಕಾರ್ಯಕ್ರಮಕ್ಕೆ ಅವಕಾಶ ನೀಡುವುದಿಲ್ಲ ಎಂದು ತೆಲಂಗಾಣ ಬಿಜೆಪಿ ಸಂಸದ ಧರ್ಮಪುರಿ ಅರವಿಂದ್ ಬೆದರಿಕೆ ಹಾಕಿದ್ದಾರೆ.

- Advertisement -

ಫಾರೂಕಿ ಅವರಿಗೆ ಪ್ರದರ್ಶನ ನೀಡುವಂತೆ ಆಹ್ವಾನಿಸಿದ ತೆಲಂಗಾಣ ಐಟಿ ಸಚಿವ ಕೆ.ಟಿ. ರಾಮರಾಮ್ ಅವರಿಗೆ ಎಚ್ಚರಿಕೆ ನೀಡಿದ್ದಾರೆ.

ಹಿಂದೂ ದೇವ ದೇವತೆಗಳನ್ನು ಅವಮಾನಿಸುವ ಮುನಾವರ್ ಫಾರೂಕಿ ಅವರ ಪ್ರದರ್ಶನಕ್ಕೆ ಕರ್ನಾಟಕದಲ್ಲಿ ನಿಷೇಧವಿದೆ. ಈ ನಿಟ್ಟಿನಲ್ಲಿ ಕೆ.ಟಿ. ರಾಮರಾಮ್ ಅವರು ತೆಲಂಗಾಣ ಕಾರ್ಯಕ್ರಮಕ್ಕೆ ಫಾರೂಕಿಯನ್ನು ಆಹ್ವಾನ ಮಾಡಿರುವುದು ಸರಿಯಲ್ಲ ಎಂದು ತಿಳಿಸಿದರು.

- Advertisement -

ಈ ಮಧ್ಯೆ ಕೆ.ಟಿ. ರಾಮರಾವ್ ಅವರು ಮುನಾವರ್ ಫಾರೂಕಿ ಮತ್ತು ಕುನಾಲ್ ಕಮ್ರಾ ಸೇರಿದಂತೆ ಹಲವು ಹಾಸ್ಯ ಕಲಾವಿದರಿಗೆ ಹೈದರಾಬಾದ್ ನಲ್ಲಿ ಪ್ರದರ್ಶನ ನೀಡಲು ಮುಕ್ತ ಆಹ್ವಾನ ಇದೆ ಎಂದು ಹೇಳಿಕೆ ನೀಡಿದ್ದರು.

Join Whatsapp