ಶಿಕ್ಷಕರೊಬ್ಬರು ಕೆ.ಆರ್.ಎಸ್ ನಿಂದ ಬಿದ್ದು ಯಾಕೆ ಸತ್ತರು? ಈ ಬಗ್ಗೆ ಹೇಳ್ತೀರಾ ರವಿಯವರೇ?: ಎಚ್.ಡಿ. ಕುಮಾರಸ್ವಾಮಿ ಪ್ರಶ್ನೆ

Prasthutha|

ಬೆಂಗಳೂರು: ಶಿಕ್ಷಕರೊಬ್ಬರು ಕೆ.ಆರ್.ಎಸ್ ನಿಂದ ಬಿದ್ದು ಯಾಕೆ ಸತ್ತರು? ಈ ಬಗ್ಗೆ ಹೇಳ್ತೀರಾ ಸಿ.ಟಿ. ರವಿಯವರೇ…? ನನ್ನ ಬಗ್ಗೆ ಹೇಳಿಕೆ ಕೊಡುವಾಗ ಎಚ್ಚರವಿರಲಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ಎಚ್.ಡಿ.ಕುಮಾರಸ್ವಾಮಿಯವರದ್ದು ಮನೆ, ಊರು ದಾಟಿದ ಸಾಮರ್ಥ್ಯ ಎಂದು ಲೇವಡಿ ಮಾಡಿದ್ದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿಗೆ ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ತಿರುಗೇಟು ನೀಡಿದ ಅವರು, ನಾನು ಸಿ.ಟಿ.ರವಿ ವಿಚಾರಕ್ಕೆ ಹೋಗಿಲ್ಲ, ಹೀಗಿರುವಾಗ ಅವರು ನನ್ನ ಬಗ್ಗೆ ಯಾಕೆ ಮಾತನಾಡುತ್ತಿದ್ದಾರೆ? ನಮ್ಮದು ಊರಾಚೆ ಸಾಮರ್ಥ್ಯ ಎಂದು ಟೀಕಿಸಿದ್ದಾರೆ. ಸಿ.ಟಿ ರವಿಯ ಇತಿಹಾಸ ಇಡೀ ರಾಜ್ಯದ ಜನತೆಗೆ ಗೊತ್ತಿದೆ. ಶಿಕ್ಷಕರೊಬ್ಬರು ಕೆ.ಆರ್.ಎಸ್ ನಿಂದ ಬಿದ್ದು ಯಾಕೆ ಸತ್ತರು? ಈ ಬಗ್ಗೆ ಹೇಳ್ತೀರಾ ರವಿಯವರೇ ಎಂದು ಟಾಂಗ್ ನೀಡಿದ್ದಾರೆ.
ಕುಮಾರಸ್ವಾಮಿಯವರ ಹೇಳಿಕೆಯ ಬಳಿಕ ಶಿಕ್ಷಕರೊಬ್ಬರು ಸತ್ತ ವಿಷಯ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

Join Whatsapp