ಸಮಸ್ಯೆ ಹೇಳಲು ಬಂದ ಯುವಕನಿಗೆ ‘ನಾನೇನು ಮಾಡೋಕೆ ಆಗುತ್ತೆ’ ಎಂದ ಬೊಮ್ಮಾಯಿ| ಸ್ಥಳದಲ್ಲೇ ಮನವಿ ಅರ್ಜಿ ಹರಿದು ಹಾಕಿ ಆಕ್ರೋಶ!

Prasthutha|

ಬೆಂಗಳೂರು: ಸಮಸ್ಯೆ ಹೇಳಲು ಬಂದ ಯುವಕನಿಗೆ ‘ನಾನೇನು ಮಾಡೋಕೆ ಆಗುತ್ತೆ? ನೀವೇ ಕೋರ್ಟಿನಲ್ಲಿ ನೋಡಿಕೊಳ್ಳಿ’ ಎಂದು ಮುಖ್ಯಂಮತ್ರಿ ಬಸವರಾಜ ಬೊಮ್ಮಾಯಿ ಬೇಜವಾಬ್ದಾರಿತನದ ಹೇಳಿಕೆ ನೀಡಿದ್ದು, ಇದರಿಂದ ಆಕ್ರೋಶಗೊಂಡ ಯುವಕ ಸ್ಥಳದಲ್ಲೇ ಮನವಿ ಅರ್ಜಿ ಹರಿದು ಹಾಕಿದ ಘಟನೆ ನಡೆದಿದೆ.

- Advertisement -

ಕೆಪಿಟಿಸಿಎಲ್ ಹುದ್ದೆ ನೇಮಕಾತಿಯ ಆಕಾಂಕ್ಷಿಯೊಬ್ಬ ಸಿಎಂ ಗೃಹಕಚೇರಿ ಬಳಿ ನೇಮಕಾತಿ ಗೊಂದಲ ಸರಿಪಡಿಸುವಂತೆ ಮುಖ್ಯಂಮತ್ರಿ ಬೊಮ್ಮಾಯಿಗೆ ಮನವಿ ಮಾಡಿದ್ದಾನೆ. ಇದಕ್ಕೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ನಾನೇನು ಮಾಡೋಕೆ ಆಗುತ್ತೆ? ಈ ವಿಚಾರದಲ್ಲಿ ಸ್ಟೇ ಇದೆ, ನೀವೇ ಕೋರ್ಟ್‌ನಲ್ಲಿ ನೋಡಿಕೊಳ್ಳಿ ಎಂದು ಹೇಳಿದ್ದಾರೆ.

ಇದರಿಂದ ಕೋಪಗೊಂಡ ಯುವಕ ಅರ್ಜಿಯನ್ನು ಹರಿದು ಹಾಕಿ, 5-6 ವರ್ಷ ಓದಿ ಬರೆದ ಪರೀಕ್ಷೆ ನೇಮಕಾತಿ ರದ್ದು ಮಾಡಲಾಗಿದೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾನೆ.

Join Whatsapp