ವಿವಿ ಕಾಲೇಜು: ಬ್ಯಾರಿ ಜನಾಂಗ ಮತ್ತು ಕೋವಿಡೋತ್ತರ ಶಿಕ್ಷಣ ಕುರಿತ ವೆಬಿನಾರ್

Prasthutha|

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯ ಬ್ಯಾರಿ ಅಧ್ಯಯನ ಪೀಠದ ವತಿಯಿಂದ “ಬ್ಯಾರಿಜನಾಂಗ ಮತ್ತು ಕೋವಿಡೋತ್ತರ ಶಿಕ್ಷಣ”ಎಂಬ ವೆಬಿನಾರ್ ರ್ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.

- Advertisement -


ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕಣಚೂರು ಇಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ಡ್ಸೈನ್ಸ್ ಇದರ ಪ್ರಾಂಶುಪಾಲ ಪ್ರೊ. ಇಕ್ಬಾಲ್ ಅಹಮದ್ ಯು ಟಿ, ಬ್ಯಾರಿ ಜನಾಂಗ ಇತ್ತೀಚಿನ ದಿನಗಳಲ್ಲಿ ಶಿಕ್ಷಣಕ್ಕೆ ಹೆಚ್ಚು ಮಹತ್ವವನ್ನು ನೀಡುತ್ತಿರುವುದು ಆಶಾದಾಯಕ ಬೆಳವಣಿಗೆ ಎಂದರು. ಶಿಖರೋಪನ್ಯಾಸ ನೀಡಿದ ಸರಕಾರಿ ಪದವಿಪೂರ್ವ ಕಾಲೇಜು, ಬಿ ಮೂಡ, ಬಂಟ್ವಾಳ ಇದರ ಉಪನ್ಯಾಸಕ ಪ್ರೊ. ಅಬ್ದುಲ್ ರಝಾಕ್ ಅನಂತಾಡಿ, ಕೋವಿಡ್ ಪರಿಸ್ಥಿತಿಯಲ್ಲಿ ಶಿಕ್ಷಣ ಕ್ಷೇತ್ರ ಹಾಗೂ ಬ್ಯಾರಿ ಜನಾಂಗ ಎದುರಿಸುತ್ತಿರುವ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿದರು. ಕೋವಿಡ್ ಪರಿಸ್ಥಿತಿಯಿಂದ ನಾವು ಶೈಕ್ಷಣಿಕ ಕ್ಷೇತ್ರದಲ್ಲಿ ಹಿಂದೆ ಸಾಗುತ್ತಿದ್ದೇವೆ ಎಂದು ವಿಷಾದ ವ್ಯಕ್ತ ಪಡಿಸಿದಅವರು, ನಿಯಮಗಳನ್ನು ಪಾಲಿಸಿ ಶಾಲಾ-ಕಾಲೇಜುಗಳನ್ನು ತೆರೆಯಬೇಕೆಂಬ ಸಲಹೆ ನೀಡಿದರು.


ಸರಕಾರಿ ಪ್ರಥಮ ದರ್ಜೆ ಕಾಲೇಜು, ಬಂಟ್ವಾಳ ಇಲ್ಲಿನ ಸಹಾಯ ಪ್ರಾದ್ಯಾಪಕ ಪ್ರೊ. ಹೈದರಾಲಿ, ಕೋವಿಡ್ ಪರಿಸ್ಥಿಯಲ್ಲಿ ಬ್ಯಾರಿ ಜನಾಂಗ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಮುಂದಿನ ಮಾರ್ಗೋಪಾಯಗಳ ಬಗ್ಗೆ ಮಾಹಿತಿ ನೀಡಿದರು. ಬ್ಯಾರಿ ಅಧ್ಯಯನ ಪೀಠದ ಸದಸ್ಯ ಜ| ಅಹಮದ್ ಬಾವ ಮೊಯ್ದೀನ್ ಸಂದರ್ಭೋಚಿತವಾಗಿ ಮಾತನಾಡಿದರು.

- Advertisement -


ಬ್ಯಾರಿ ಅಧ್ಯಯನ ಪೀಠದ ಸಂಯೋಜಕ ಡಾ.ಎ ಸಿದ್ಧಿಕ್ ಸ್ವಾಗತಿಸಿ, ಪೀಠದ ಸ್ವಯಂಸೇವಕಿ ಆಯಿಶಾ ಸಾಬಿದಾ ವಂದಿಸಿದರು. ತಸ್ರೀಫ ಕಾರ್ಯಕ್ರಮ ನಿರೂಪಿಸಿದರು.

Join Whatsapp