ಎಲ್ಲಾ ದೇವಾಲಯಗಳಲ್ಲೂ ಲೌಡ್ ಸ್ಪೀಕರ್ ಹಾಕಿ ಭಜನೆ ಮಾಡುತ್ತೇವೆ: ಮುತಾಲಿಕ್

Prasthutha|

- Advertisement -

ಬೆಂಗಳೂರು: ಮಸೀದಿಯಲ್ಲಿರುವ ಧ್ವನಿವರ್ಧಕಕ್ಕೆ ವಿರುದ್ಧವಾಗಿ ದೇವಾಸ್ಥಾನದಲ್ಲೂ ಧ್ವನಿವರ್ಧಕಗಳನ್ನು ಅಳವಡಿಸಿ ಸರ್ಕಾರಕ್ಕೆ ಮೇ 1ರ ವರೆಗೆ ಗಡುವು ಕೊಡುತ್ತೇವೆ. ಅಷ್ಟರೊಳಗೆ ಮಸೀದಿಗಳ ಧ್ವನಿವರ್ಧಕಗಳನ್ನು ತೆಗೆಸದಿದ್ದರೆ, ಮೇ 9 ರಂದು ಕರ್ನಾಟಕದ ಎಲ್ಲಾ ದೇವಾಲಯಗಳಲ್ಲೂ ಲೌಡ್ ಸ್ಪೀಕರ್ ಮೂಲಕ ಭಜನೆ, ಸುಪ್ರಭಾತಗಳನ್ನು ಹಾಕಿಸುತ್ತೇವೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ತಿಳಿಸಿದ್ದಾರೆ.

ಈಗಾಗಲೇ ನೂರಾರು ದೇವಾಲಯಗಳೊಂದಿಗೆ ಮಾತುಕತೆ ನಡೆಸಿದ್ದೇವೆ. ಮಠಾಧೀಶರೊಂದಿಗೂ ಮಾತನಾಡಲಿದ್ದೇವೆ. ಮೇ 1 ರೊಳಗೆ ಮಸೀದಿಗಳ ಧ್ವನಿವರ್ಧಕಗಳನ್ನು ಸಂಪೂರ್ಣವಾಗಿ ತೆಗೆಸಬೇಕು. ಇಲ್ಲದೇ ಇದ್ದರೆ ಮೇ 9 ರಂದು ಎಲ್ಲಾ ದೇವಸ್ಥಾನಗಳಲ್ಲಿ ಲೌಡ್ ಸ್ಪೀಕರ್ ಮೊಳಗುವುದು ಖಚಿತ ಎಂದಿದ್ದಾರೆ.

- Advertisement -

ಇದೇ ವೇಳೆ ಮಾತನಾಡಿದ ಮುತಾಲಿಕ್ ಹುಬ್ಬಳಿಯ ವಾಣಿ ಬಡಾವಣೆ ಅಕ್ರಮವಾಗಿ ನಿರ್ಮಾಣವಾಗಿದೆ. ಇದಕ್ಕೆ ಮೊದಲು ಜೆಸಿಬಿ ಹಾಕಿ ಕಿತ್ತು ಬಿಡಿ. ಹುಬ್ಬಳ್ಳಿಯಲ್ಲಿ ಗಲಭೆಯಾದರೂ ಎಚ್ಚೆತ್ತುಕೊಳ್ಳಿ. ಮೊನ್ನೆ ಗಲಭೆಯಾಗಿರುವ ಸಂದರ್ಭದಲ್ಲಿ ಅತೀ ಹೆಚ್ಚು ಜನ ಈ ಬಡಾವಣೆಯಲ್ಲೇ ಸೇರಿದ್ದರು ಎಂದು ತಿಳಿಸಿದರು.

Join Whatsapp