ಉದಯಪುರ ಹತ್ಯೆ ನಾವು ಮಾಡಿಸಿಲ್ಲ: ಬಿಜೆಪಿ ಸ್ಪಷ್ಟೀಕರಣ

Prasthutha|

ಜೈಪುರ್: ಉದಯಪುರದಲ್ಲಿ ನಡೆದ ಕನ್ಹಯ್ಯ ಲಾಲ್ ಹತ್ಯೆ ಪ್ರಕರಣದ ಆರೋಪಿಗಳ ಪೈಕಿ ಒಬ್ಬನಿಗೆ ಬಿಜೆಪಿ ಜೊತೆಗೆ ನಂಟಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ, ಹತ್ಯೆಯನ್ನು ನಾವು ಮಾಡಿಸಿಲ್ಲ ಹಾಗೂ ನಮಗೂ ಆರೋಪಿಗಳಿಗೂ ಸಂಬಂಧವಿಲ್ಲ ಎಂದು ಹೇಳಿದೆ.

- Advertisement -


ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ರಾಜಸ್ಥಾನ ಬಿಜೆಪಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸಾದಿಖ್ ಖಾನ್, ಇಬ್ಬರು ಆರೋಪಿಗಳಿಗೂ ನಮಗೂ ಯಾವುದೇ ಸಂಬಂಧವಿಲ್ಲ, ರಾಜಸ್ಥಾನ ಕಾಂಗ್ರೆಸ್ ಸರಕಾರದ ವೈಫಲ್ಯದಿಂದಾಗಿ ಈ ಹತ್ಯೆ ನಡೆದಿದೆ ಎಂದು ಹೇಳಿದ್ದಾರೆ.

ಹತ್ಯೆ ಆರೋಪಿಗಳ ಪೈಕಿ ರಿಯಾಝ್ ಅತ್ತಾರಿಯ ಬಿಜೆಪಿ ಸದಸ್ಯ ಎಂದು ಕಾಂಗ್ರೆಸ್ ಆರೋಪಿಸಿದ್ದು, ಈ ವಿಚಾರವನ್ನು ಮುಚ್ಚಿ ಹಾಕಲೆಂದೇ ಕೇಂದ್ರ ಸರಕಾರ ಈ ಪ್ರಕರಣವನ್ನು ಎನ್ ಐ ಎಗೆ ಹಸ್ತಾಂತರಿಸಿತ್ತೇ ಎಂದು ಪ್ರಶ್ನಿಸಿದೆ.

Join Whatsapp