ಗುರ್ಗಾಂವ್ | ಮುಸ್ಲಿಮರ ನರಮೇಧಕ್ಕೆ ಕರೆ; ಸಂಘಪರಿವಾರದ ಮುಖಂಡರ ವಿರುದ್ಧ ಪ್ರಕರಣ ದಾಖಲು

Prasthutha|

ಗುರ್ಗಾಂವ್: ಉದಯಪುರದಲ್ಲಿ ಟೈಲರ್ ಹತ್ಯೆಯನ್ನು ವಿರೋಧಿಸಿ ಸಂಘಪರಿವಾರ ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ಮುಸ್ಲಿಮರ ವಿರುದ್ಧ ದ್ವೇಷಪೂರಿತ ಭಾಷಣ ಮತ್ತು ನರಮೇಧಕ್ಕೆ ಕರೆನೀಡಿದ ಘಟನೆಗೆ ಸಂಬಂಧಿಸಿದಂತೆ ಹರ್ಯಾಣ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

- Advertisement -

ಈ ಪ್ರತಿಭಟನಾ ಸಭೆಯುದ್ಧಕ್ಕೂ ವಿ.ಎಚ್.ಪಿ ಮತ್ತು ಬಜರಂಗದಳ ಕಾರ್ಯಕರ್ತರು ಮುಸ್ಲಿಮರ ವಿರುದ್ಧ ಪ್ರಚೋದನಾಕಾರಿಯಾಗಿ ಘೋಷಣೆ ಕೂಗುತ್ತಿರುವುದು ವೀಡಿಯೋದಲ್ಲಿ ಸೆರೆಯಾಗಿದೆ.

ರಾಜಸ್ಥಾನದ ಉದಯಪುರದಲ್ಲಿ ಟೈಲರ್ ಹತ್ಯೆಯನ್ನು ಖಂಡಿಸಿ ವಿ.ಎಚ್.ಪಿ, ಬಜರಂಗದಳದ ಕಾರ್ಯಕರ್ತರು ಗುರ್ಗಾಂವ್’ನ ನೆಹರು ಪಾರ್ಕ್’ನಲ್ಲಿ ಜಮಾಯಿಸಿ ನಗರದ ಹರೀಶ್ ಬೇಕರಿ ಚೌಕ್’ವರೆಗೆ ಮೆರವಣಿಗೆ ನಡೆಸಿದ್ದರು.

- Advertisement -

ಈ ನಿಟ್ಟಿನಲ್ಲಿ ಗುರ್ಗಾಂವ್ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಪೊಲೀಸ್ ವಕ್ತಾರ ಸುಭಾಷ್ ಬೋಕೆನ್ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಸದ್ಯ ಸಂಘಪರಿವಾರದ ಮುಖಂಡರ ವಿರುದ್ಧ ಐಪಿಸಿ ಸೆಕ್ಷನ್ 153 ಎ. 295 ಎ, 34, 504 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿವೆ.

https://twitter.com/TheMuslimNewss/status/1542402251364646912
Join Whatsapp