ಉರಗ ರಕ್ಷಕ ವಾವಾ ಸುರೇಶ್ ಆರೋಗ್ಯ ಚೇತರಿಕೆ: ಮುಂದಿನ 48 ಗಂಟೆ ನಿರ್ಣಾಯಕ !

Prasthutha|

ಕೊಟ್ಟಾಯಂ: ಹಾವು ಕಚ್ಚಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪ್ರಖ್ಯಾತ ಉರಗ ರಕ್ಷಕ ವಾವಾ ಸುರೇಶ್ ಅವರ ಆರೋಗ್ಯ ಸ್ಥಿತಿಯಲ್ಲಿ ಗುರುವಾರ ಸ್ವಲ್ಪ ಸುಧಾರಣೆಯಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

- Advertisement -

ವೆಂಟಿಲೇಟರ್ ಮೂಲಕವೇ ಉಸಿರಾಟ ಮಾಡಿಸಲಾಗುತ್ತಿದ್ದು, ಮುಂದಿನ  48  ಗಂಟೆಗಳು ನಿರ್ಣಾಯಕ ಎಂದು ವೈದ್ಯರು ತಿಳಿಸಿದ್ದಾರೆ.

ಮಂಗಳವಾರ ಅವರು ಸ್ವಯಂ ಉಸಿರಾಟ ಆರಂಭಿಸಿದ್ದರು, ಅವರ ಹೃದಯ ಮತ್ತು ಶ್ವಾಸಕೋಶ ಸಾಮಾನ್ಯ ಸ್ಥಿತಿಗೆ ಮರಳಿವೆ ಎಂದು ಆಸ್ಪತ್ರೆಯ ಸುಪರಿಟೆಂಡೆಂಟ್ ಡಾ.ಟಿ.ಕೆ.ಜಯಕುಮಾರ್ ತಿಳಿಸಿದ್ದಾರೆ.

- Advertisement -

ವಿಷವೇರಿದ ಪರಿಣಾಮವಾಗಿ ಬುಧವಾರ ಅವರು ಸ್ಪಂದಿಸುವುದನ್ನು ನಿಲ್ಲಿಸಿದ್ದು, ಉಸಿರಾಟದಲ್ಲೂ ಏರು ಪೇರಾಗಿತ್ತು. ರಕ್ತದ ಒತ್ತಡವೂ ಕುಸಿದಿತ್ತು. ಆದರೆ 11 ಗಂಟೆಯ ವೇಳೆಗೆ ಸ್ವಲ್ಪ ಚೇತರಿಕೆ ಕಂಡು ಬಂದಿದೆ ಎಂದು ವೈದ್ಯರು ತಿಳಿಸಿದ್ದಾರೆ.



Join Whatsapp